ADVERTISEMENT

ಮೊರಾಕ್ಕೊ ಮೇಲ್ವಿಚಾರಕರಾಗಿ ಪ್ರತಾಪ್‌ ಮಧುಕರ್ ಕಾಮತ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 17:15 IST
Last Updated 30 ಜನವರಿ 2023, 17:15 IST

ಬೆಂಗಳೂರು: ‘ಕರ್ನಾಟಕ ರಾಜ್ಯದ ಮೊರಾಕ್ಕೊ ದೇಶದ ಮೇಲ್ವಿಚಾರಕರನ್ನಾಗಿ ಪ್ರತಾಪ್‌ ಮಧುಕರ್ ಕಾಮತ್‌ ಅವರನ್ನು ನೇಮಿಸಲಾಗಿದೆ’ ಎಂದು ಮೊರಾಕ್ಕೊ ದೇಶದ ಭಾರತದ ರಾಯಭಾರಿ ಮಹಮ್ಮದ್ ಮಲಿಕಿ ತಿಳಿಸಿದರು.

‘ಈಗಾಗಲೇ ಮುಂಬೈ, ಕೋಲ್ಕತ್ತ ನಗರಗಳಲ್ಲಿ ಮೊರಾಕ್ಕೊ ಕಚೇರಿಗಳನ್ನು ತೆರೆಯಲಾಗಿದ್ದು, ಜ. 28ರಂದು ಬೆಂಗಳೂರಿನಲ್ಲಿ ನೂತನ ಕಚೇರಿಯನ್ನು ಉದ್ಘಾಟನೆ ಮಾಡಲಾಗಿದೆ. ಮೊರಾಕ್ಕೊ ಸಾಮ್ರಾಜ್ಯವು ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ತನ್ನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೊರಾಕ್ಕೊ ದೇಶದಲ್ಲಿ ರಾಜ್ಯದ ಹಲವಾರು ಕಂಪನಿಗಳು ಹೊಡಿಕೆ ಮಾಡಿವೆ. ಅದರೊಂದಿಗೆ ಎರಡು ದೇಶಗಳ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಪ್ರತಾಪ್‌ ಮಧುಕರ್‌ ಕಾಮತ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.