ADVERTISEMENT

ಕರ್ನಾಟಕ ರಾಜ್ಯೋತ್ಸವದ: 10 ಲಕ್ಷ ಸಸಿ ನೆಡಲು ‘ಪ್ರೆಸ್ಟೀಜ್’ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 15:23 IST
Last Updated 2 ನವೆಂಬರ್ 2025, 15:23 IST
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಗರದಲ್ಲಿ 10 ಲಕ್ಷ ಸಸಿ ನೆಡುವ ‘ಪ್ರೆಸ್ಟೀಜ್‌ ಗ್ರೀನ್‌ ಪ್ರಾಮೀಸ್’ ಯೋಜನೆಗೆ ಪ್ರೆಸ್ಟೀಜ್‌ ಸಮೂಹ ಚಾಲನೆ ನೀಡಿದೆ
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಗರದಲ್ಲಿ 10 ಲಕ್ಷ ಸಸಿ ನೆಡುವ ‘ಪ್ರೆಸ್ಟೀಜ್‌ ಗ್ರೀನ್‌ ಪ್ರಾಮೀಸ್’ ಯೋಜನೆಗೆ ಪ್ರೆಸ್ಟೀಜ್‌ ಸಮೂಹ ಚಾಲನೆ ನೀಡಿದೆ   

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಗರದಲ್ಲಿ 10 ಲಕ್ಷ ಸಸಿ ನೆಡಲು ನಿರ್ಧರಿಸಲಾಗಿದೆ ಎಂದು ಪ್ರೆಸ್ಟೀಜ್‌ ಸಮೂಹ ತಿಳಿಸಿದೆ.

ಕರ್ನಾಟಕ ರಾಜ್ಯೋತ್ಸವದ ದಿನ ‘ಪ್ರೆಸ್ಟೀಜ್‌ ಗ್ರೀನ್‌ ಪ್ರಾಮೀಸ್’ ಯೋಜನೆಗೆ ಸಸಿ ನೆಡುವ ಮೂಲಕ ಸಮೂಹವು ಚಾಲನೆ ನೀಡಿದೆ. ಆರಂಭಿಕವಾಗಿ 10 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ. ಪ್ರತಿಯೊಬ್ಬ ಉದ್ಯೋಗಿಯು ತಲಾ ಒಂದು ಸಸಿ ನೆಡಲಿದ್ದಾರೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಯೋಜನೆ ಆರಂಭಿಸಲಾಗಿದೆ ಎಂದು ಕಂಪ‍ನಿ ತಿಳಿಸಿದೆ. ಈ ವೇಳೆ ಕಂಪನಿಯ ಸಿಬ್ಬಂದಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT