ಬೆಂಗಳೂರು: ಪೊಲೀಸ್ ಇಲಾಖೆಯ 17 ಡಿವೈಎಸ್ಪಿ(ಸಿವಿಲ್) ಅಧಿಕಾರಿಗಳಿಗೆ ಎಸ್ಪಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಗುಪ್ತವಾರ್ತೆಯ ಎಸ್.ಪಿ ಹುದ್ದೆಗಳಿಗೆ ಡಿವೈಎಸ್ಪಿ ಅಧಿಕಾರಿಗಳಾದವಿ.ಮರಿಯಪ್ಪ, ಎಸ್.ರಮೇಶ್ ಕುಮಾರ್ , ಎನ್.ವಾಸುದೇವರಾಮ (ಎಸ್.ಪಿ.ಎ.ಟಿ ಘಟಕ), ಎಚ್.ಪ್ರವೀಣ್ ನಾಯಕ್ (ಮಂಗಳೂರು) ಅವರಿಗೆ ಬಡ್ತಿ ನೀಡಲಾಗಿದೆ.
ಪಿ.ಎ.ಪುರುಷೋತ್ತಮ, ವಾಲಿ ಬಾಷಾ, ಎಂ.ವೇಣುಗೋಪಾಲ್, ಸಿ.ಮಲ್ಲಿಕ್, ಪುಟ್ಟಮಾದಯ್ಯ, ಸತೀಶ್ ಎಸ್.ಚಿಟಗುಬ್ಬಿ , ಕೆ.ಎಸ್.ಸುಂದರರಾಜ್, ಎಂ.ಎಲ್.ಪುರುಷೋತ್ತಮ (ಲೋಕಾಯುಕ್ತ), ಬಿ.ಎಂ.ನಾರಾಯಣಸ್ವಾಮಿ (ಕೋಲಾರ ಹೆಚ್ಚುವರಿ ಎಸ್ಪಿ), ಎಂ.ವಿಜಯಕುಮಾರ್ (ಹಾವೇರಿ ಹೆಚ್ಚುವರಿ ಎಸ್ಪಿ), ಎಚ್.ಮಂಜುನಾಥ ಬಾಬು, ಅನಿಲ್ ಕುಮಾರ್ ಎಸ್.ಭೂಮರೆಡ್ಡಿ (ಡಿಸಿಆರ್ಇ ), ವಿ.ಬಿ.ಭಾಸ್ಕರ್ (ಐಎಸ್ಡಿ) ಅವರಿಗೆ ಬಡ್ತಿ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.