ADVERTISEMENT

ಬೆಂಗಳೂರು: ​ಪುನೀತ್ ಅಭಿಮಾನಿಗಳ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 14:34 IST
Last Updated 29 ಅಕ್ಟೋಬರ್ 2021, 14:34 IST
   

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುವ ವೇಳೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತು.

ಮಹಿಳೆಯರು ಪಾರ್ಥೀವ ಶರೀರ ಕಂಡೊಡನೆ ಅಯ್ಯೋ ದೇವರೆ.. ಅಯ್ಯೋ.. ಎಂದು ರೋಧಿಸಿದರು.

ಪವರ್ ಸ್ಟಾರ್‌ಗೆ ಜೈ... ಅಪ್ಪು ಬಾಸ್‌ಗೆ ಜೈ, ಡಾ.ರಾಜ್‌ಕುಮಾರ್‌ಗೆ ಜೈ ಎನ್ನುತ್ತಾ ಅಭಿಮಾನ ಮೆರೆದರು. ಕೆಲವರು ಸಾಷ್ಟಾಂಗ ನಮಸ್ಕಾರ ಹಾಕಿದರೆ, ಇನ್ನು ಹಲವರು ಕೈಮುಗಿದು 'ಅಪ್ಪು'ಗೆ ಗೌರವ ಸಲ್ಲಿಸಿದರು.

ADVERTISEMENT

ಪಾರ್ಥೀವ ಶರೀರದ ಚಿತ್ರ ಸೆರೆಹಿಡಿಯಲು, ವಿಡಿಯೋ ಚಿತ್ರೀಕರಿಸಲು ಅಭಿಮಾನಿಗಳು ಮುಂದಾದರು. ಅವರನ್ನು ಸಾಗಹಾಕಲು ಪೊಲೀಸರು ಹರಸಾಹಸಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.