ADVERTISEMENT

ಡಿ.ಜಿ.ಹಳ್ಳಿ ಗಲಭೆ ಪ್ರಕರಣ ತಪ್ಪಿತಸ್ಥರಿಗೆ ಶಿಕ್ಷೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 20:08 IST
Last Updated 15 ಸೆಪ್ಟೆಂಬರ್ 2020, 20:08 IST

ಬೆಂಗಳೂರು: ‘ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಲ್ಲಿ ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ, ಈ ಹಂತದಲ್ಲಿ ಪೊಲೀಸ್‌ ತನಿಖೆಯಲ್ಲಿ ಮೂಗು ತೂರಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

‘ಒಂದು ವೇಳೆ ಅಮಾಯಕರು ಬಂಧಿಸಲ್ಪಟ್ಟಿದ್ದರೆ, ಅದನ್ನು ಅವರು ಸಾಬೀತುಪಡಿಸಿದರೆ, ಪೊಲೀಸರು ಬಿಡುತ್ತಾರೆ’ ಎಂದು ಯಡಿಯೂರಪ್ಪ ಅವರು ತಮ್ಮನ್ನು ಭೇಟಿ ಮಾಡಿದ ಹಜರತ್ ಮೌಲಾನಾ ಸಗೀರ್‌ ಅಹ್ಮದ್‌ ರಶ್ದಿ ನಿಯೋಗಕ್ಕೆ ತಿಳಿಸಿದರು.

‘ಬಂಧನಕ್ಕೆ ಒಳಗಾದವರಲ್ಲಿ ಅಮಾಯಕರು ಇದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು‘ ಎಂದು ನಿಯೋಗವು ಮನವಿ ಸಲ್ಲಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.