ರಾಜರಾಜೇಶ್ವರಿ ನಗರ: ಜ್ಞಾನಭಾರತಿ ಬಡಾವಣೆಯಲ್ಲಿರುವ ಮಹಾಲಕ್ಷ್ಮಿ ಹಟ್ಟಿಲಕ್ಕಮ್ಮ ದೇವಿಯ 17ನೇ ವಾರ್ಷಿಕೋತ್ಸವ, ದೇವರ ಉತ್ಸವ, ಮೆರವಣಿಗೆ ಶುಕ್ರವಾರ ಜರುಗಿತು.
ವಿವಿಧ ಹೋಮ, ಹವನ, ಸಾಂಸ್ಕೃತಿಕ ಕಾರ್ಯಕ್ರಮ, ದೇವರ ನಾಮಸ್ಮರಣೆ, ಭಕ್ತಿ ಗೀತೆಗಳ ಗಾಯನ, ಅನ್ನಪ್ರಸಾದ ನಡೆಯಿತು.
ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಜಿ. ಮುನಿರಾಜು, ದೇವಸ್ಥಾನದ ಪ್ರಧಾನ ಆರ್ಚಕರಾದ ಸುಶೀಲಮ್ಮ, ಮುಖಂಡರಾದ ಜಿ. ಮುತ್ತಯ್ಯ, ವೆಂಕಟೇಶ್, ಜಗದೀಶ್, ರಾಜಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.