ADVERTISEMENT

ರಾಜಭವನಕ್ಕೆ ಅಕ್ರಮ ಪ್ರವೇಶ: ವ್ಯಕ್ತಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 19:23 IST
Last Updated 3 ನವೆಂಬರ್ 2018, 19:23 IST

ಬೆಂಗಳೂರು: ರಾಜಭವನದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಆರೋಪದಡಿ ಇಸ್ಮಾಯಿಲ್ ಎಂಬುವರನ್ನು ವಶಕ್ಕೆ ಪಡೆದಿದ್ದ ವಿಧಾನಸೌಧ ಪೊಲೀಸರು, ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

‌ಕಂಪನಿಯೊಂದರ ಉದ್ಯೋಗಿಯಾದ ಇಸ್ಮಾಯಿಲ್, ಊಟಕ್ಕೆಂದು ಶಾಸಕರ ಭವನದ ಹೋಟೆಲ್‌ಗೆ ಅ. 28ರಂದು ಬಂದಿದ್ದರು. ಊಟದ ನಂತರ ಬೈಕ್‌ನಲ್ಲಿ ರಾಜಭವನದೊಳಗೆ ಪ್ರವೇಶಿಸಿದ್ದರು. ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಬಾಲಕೃಷ್ಣ, ಅವರನ್ನು ಪೊಲೀಸರ ವಶಕ್ಕೆ ನೀಡಿದ್ದರು.

‘ಇಸ್ಮಾಯಿಲ್‌ ಅವರಿಗೆ ಶಾಸಕರ ಭವನದಿಂದ ಹೊರಗೆ ಹೋಗುವ ದಾರಿ ಬಗ್ಗೆ ಗೊತ್ತಿರಲಿಲ್ಲ. ತಪ್ಪು ದಾರಿಯಲ್ಲಿ ಹೋಗಿ ಹಿಂಬಾಗಿಲಿನಿಂದ ರಾಜಭವನದ ಒಳಗೆ ಪ್ರವೇಶಿಸಿದ್ದರು. ವಿಚಾರಣೆ ನಡೆಸಿದಾಗ, ತಮಗೆ ಗೊತ್ತಿಲ್ಲದೇ ಒಳಗೆ ಹೋದೆ ಎಂದು ಇಸ್ಮಾಯಿಲ್ ಹೇಳಿದರು. ಪುನಃ ಆ ರೀತಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದೇವೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.