ಬೆಂಗಳೂರು: ರಾಷ್ಟ್ರಮಟ್ಟದ ರಿಯಲ್ ಎಸ್ಟೇಟ್ ಎಕ್ಸ್ ಪೋ ಮತ್ತು ಸಮಾವೇಶ ಹೊಟೇಲ್ ಲಲಿತ್ ಅಶೋಕನಲ್ಲಿ ಜ. 14 ಮತ್ತು 15 ರಂದು ನಡೆಯಲಿದೆ.
‘ಜಿತೋ’ ಬೆಂಗಳೂರು ಉತ್ತರ ವಲಯದ ಆಶ್ರಯದಲ್ಲಿ ಈ ಸಮಾವೇಶ ನಡೆಯಲಿದ್ದು, ವೈಷ್ಣೋದೇವಿ ಗ್ರೂಪ್ ಆಫ್ ಅಸೋಸಿಯೇಷನ್ ಮತ್ತು ಆರ್.ಆರ್.ಬಿ.ಸಿ ಮತ್ತು ಸ್ವಾಮಿತ್ವ ಸಂಸ್ಥೆಗಳ ಸಹಯೋಗ ನೀಡಿವೆ. ಎಸ್.ಎನ್.ಎನ್ ರಾಜ್ ಗ್ರೂಪ್ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಮೊದಲ ಬಾರಿಗೆ ಈ ಸಮ್ಮೇಳನದಲ್ಲಿ ಭಾಗಿಯಾಗುತ್ತಿದೆ.
‘ಇಂದು ನಗರಗಳು ತ್ವರಿತವಾಗಿ ಬೆಳವಣಿಗೆಯಾಗುತ್ತಿದ್ದು, ವ್ಯವಹಾರದ ಅವಕಾಶಗಳು ಹೆಚ್ಚಾಗುತ್ತಿವೆ. ಆದರೆ, ಸೂಕ್ತ ಸಂಪರ್ಕ ವೇದಿಕೆಗಳಿಲ್ಲದ ಕಾರಣ ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ರಿಯಲ್ ಎಸ್ಟೇಟ್ ಎಕ್ಸ್ ಪೋಗಾಗಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿತೋ ಬೆಂಗಳೂರು ಉತ್ತರ ವಲಯ ಅಧ್ಯಕ್ಷ ಇಂದರ್ ಚಂದ್ ಬೊಹ್ರಾ ತಿಳಿಸಿದ್ದಾರೆ.
ಜಿತೋ ಕೆಕೆಜಿ ವಲಯದ ಅಧ್ಯಕ್ಷ ಅಶೋಕ್ ಸಲೆಚಾ ಮಾತನಾಡಿ, ‘ಇದೇ ಮೊದಲ ಬಾರಿಗೆ ವಲಯವಾರು ಸಮಾವೇಶ ಆಯೋಜಿಸುತ್ತಿದ್ದು, ಬೆಂಗಳೂರು ದಕ್ಷಿಣ, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ ವಲಯದದಲ್ಲಿಯೂ ಸಹ ಹೆಚ್ಚಿನ ಪ್ರಮಾಣದಲ್ಲಿ ಜೈನ ಸಮುದಾಯದವರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.