ಬೆಂಗಳೂರು: ಬಂಡೇಪಾಳ್ಯ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಿಯೋನಾಥ್ (27) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಸ್ಸಾಂನ ಕಿಯೋನಾಥ್ ಕಳೆದ ವರ್ಷ ನಗರಕ್ಕೆ ಬಂದಿದ್ದರು. ರೆಸ್ಟೊರೆಂಟ್ನಲ್ಲಿ ಕೆಲಸ ಮಾಡುತ್ತಿದ್ದರು. ಎಂ.ಎನ್. ಪಾಳ್ಯದ ಬಾಡಿಗೆ ಮನೆಯಲ್ಲಿ ಇದ್ದರು.
‘ಹುಷಾರಿಲ್ಲವೆಂದು ಹೇಳಿದ್ದ ಕಿಯೋನಾಥ್ ಎರಡು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಬುಧವಾರ ಸ್ನೇಹಿತರು ಕೆಲಸಕ್ಕೆ ಹೋಗಿ ರಾತ್ರಿ 11ರ ಸುಮಾರಿಗೆ ವಾಪಸು ಬಂದಿದ್ದರು. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಮಾಲೀಕರಿಂದ ಬೇರೊಂದು ಕೀ ಪಡೆದು ಬಾಗಿಲು ತೆರೆದು ನೋಡಿದಾಗ, ಕೊಠಡಿಯಲ್ಲಿ ಕಿಯೋನಾಥ್ ನೇಣು ಬಿಗಿದುಕೊಂಡಿದ್ದು ಕಾಣಿಸಿತ್ತು.ನನ್ನ ಸಾವಿಗೆ ನಾನೇ ಕಾರಣ‘ ಎಂಬ ಮರಣಪತ್ರ ಮನೆಯಲ್ಲಿ ಸಿಕ್ಕಿದೆ' ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.