ADVERTISEMENT

ಕಾರು ಗುದ್ದಿ ಪೇಂಟರ್ ಸಾವು

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 20:25 IST
Last Updated 25 ಜನವರಿ 2023, 20:25 IST
   

ಬೆಂಗಳೂರು: ಬೇಗೂರು ಕೊಪ್ಪ ಮುಖ್ಯರಸ್ತೆಯಲ್ಲಿ ಕಾರೊಂದು ಗುದ್ದಿ ಪಾದಚಾರಿ ರಾಧೇಶ್ಯಾಮ್ (48) ಎಂಬುವವರು ಮೃತಪಟ್ಟಿದ್ದಾರೆ.

‘ವಡ್ಡರಪಾಳ್ಯ ವೈಎಸ್‌ಆರ್ ಬಡಾವಣೆ ನಿವಾಸಿ ರಾಧೇಶ್ಯಾಮ್, ಪೇಂಟರ್ ಆಗಿದ್ದರು. ಬುಧವಾರ ಬೆಳಿಗ್ಗೆ ಮುಖ್ಯರಸ್ತೆ
ಯಲ್ಲಿ ನಡೆದುಕೊಂಡು ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಹೇಳಿದರು.

‘ಚಾಲಕ ಸುಬ್ರತ್ ಅವಸ್ಥಿ, ಕಾರನ್ನು ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಚಲಾಯಿಸಿದ್ದ. ರಸ್ತೆಬದಿಯಲ್ಲಿದ್ದ ರಾಧೇಶ್ಯಾಮ್ ಅವರಿಗೆ ಕಾರು ಗುದ್ದಿತ್ತು. ಇದರಿಂದಾಗಿ ಅವರ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ತೀವ್ರ ಗಾಯಗಳಾಗಿದ್ದವು’ ಎಂದು ತಿಳಿಸಿದರು.

ADVERTISEMENT

‘ಅಪಘಾತಕ್ಕೆ ಕಾರಣವಾದ ಆರೋಪದಡಿ ಸುಬ್ರತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನನ್ನು ಬಂಧಿಸಿ, ಕಾರು ಜಪ್ತಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.