ಬೆಂಗಳೂರು: ನೀರಿನ ಸಂಪು ಅಗೆ ಯುವಾಗ ಸಿಕ್ಕಿರುವ ಚಿನ್ನದ ಮಣಿ ಮಾರುವುದಾಗಿ ಹೇಳಿ ಚೆನ್ನೈನ ‘ಸ್ವಾಮಿ ಚಿಕನ್ ಚೆಟ್ಟಿನಾಡ್’ ಹೋಟೆಲ್ ಮಾಲೀಕ ಮುರುಘನಾಥಂ ಅವರಿಗೆ ₹15 ಲಕ್ಷ ವಂಚಿಸಲಾಗಿದ್ದು, ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುರುಘನಾಥಂ ಆರೋಪಿ ಅರ್ಜುನ್, ಇತರರ ವಿರುದ್ಧ ದೂರು ನೀಡಿದ್ದಾರೆ. ‘ಆರೋಪಿ ಕೆಲ ದಿನದ ಹಿಂದೆ ಚೆನ್ನೈಗೆ ಹೋಗಿದ್ದು ದೂರುದಾರರಿಗೆ ‘ಮನೆ ಬಳಿ ನೀರಿನ ಸಂಪ್ ಅಗೆಯುವಾಗ ಚಿನ್ನದ 5 ಮಣಿ ಸಿಕ್ಕಿವೆ. ಅವುಗಳನ್ನು ₹ 25 ಲಕ್ಷಕ ಮಾರುತ್ತೇನೆ ಎಂದು ತಿಳಿಸಿ 2 ಮಣಿ ನೀಡಿದ್ದ. ಪರಿಶೀಲಿಸಿದಾಗ ಅದು ಅಸಲಿ ಚಿನ್ನವಾಗಿತ್ತು.’ ‘ಬೆಂಗಳೂರಿಗೆ ಬಂದರೆ ಮಣಿ ನೀಡುವುದಾಗಿ ಹೇಳಿದ್ದ. ₹ 15 ಲಕ್ಷ ಸಮೇತ ದೂರುದಾರ ಬಂದಿದ್ದರು. ಆಗ ಆರೋಪಿಗಳು ಹಣ ಪಡೆದುಪರಾರಿಯಾಗಿದ್ದರು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.