ADVERTISEMENT

₹ 2.57 ಲಕ್ಷ ಮರಳಿಸಿದ ಆಟೊ ಚಾಲಕ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 19:53 IST
Last Updated 4 ಫೆಬ್ರುವರಿ 2021, 19:53 IST
ಆಟೊ ಚಾಲಕ ಮೋಹನ್ ಅವರಿಗೆ ಡಿಸಿಪಿ ಸಂಜೀವ್ ಪಾಟೀಲ ಪ್ರಶಂಸನೀಯ ಪತ್ರ ನೀಡಿದರು
ಆಟೊ ಚಾಲಕ ಮೋಹನ್ ಅವರಿಗೆ ಡಿಸಿಪಿ ಸಂಜೀವ್ ಪಾಟೀಲ ಪ್ರಶಂಸನೀಯ ಪತ್ರ ನೀಡಿದರು   

ಬೆಂಗಳೂರು: ಆಟೊದಲ್ಲಿ ‍ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ₹ 2.57 ಲಕ್ಷ ಹಣವನ್ನು ಚಾಲಕ ಡಿ. ಮೋಹನ್ ಎಂಬುವರು ಪೊಲೀಸರ ಮೂಲಕ ವಾಪಸ್‌ ನೀಡಿದ್ದು, ಅವರನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಸನ್ಮಾನಿಸಿದ್ದಾರೆ.

‘ಆನಂದಪುರದ ನಿವಾಸಿ ಮೋಹನ್, ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಸಿರ್ಸಿ ವೃತ್ತದಲ್ಲಿ ಇಳಿಸಿದ್ದರು. ಅದೇ ವೇಳೆಯೇ ಪ್ರಯಾಣಿಕ, ಹಣವಿದ್ದ ಬ್ಯಾಗ್‌ನ್ನು ಆಟೊದಲ್ಲಿ ಬಿಟ್ಟು ಹೋಗಿದ್ದರು. ಬ್ಯಾಗ್ ನೋಡಿದ್ದ ಚಾಲಕ ಮೋಹನ್, ಪ್ರಯಾಣಿಕನಿಗಾಗಿ ಹುಡುಕಾಡಿದ್ದರು’ ಎಂದು ಸಂಜೀವ್ ಪಾಟೀಲ ಹೇಳಿದರು.

‘ಬ್ಯಾಗ್ ಸಮೇತ ಚಾಮರಾಜಪೇಟೆ ಠಾಣೆಗೆ ಬಂದಿದ್ದ ಮೋಹನ್, ಪೊಲೀಸರ ಬಳಿ ಘಟನೆ ಬಗ್ಗೆ ವಿವರಿಸಿದ್ದರು. ಬ್ಯಾಗ್ ವಾಪಸ್ ನೀಡಿ ಮಾನವೀಯತೆ ಮೆರೆದ ಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರ ಕೆಲಸ ಇತರೆ ಚಾಲಕರಿಗೂ ಆದರ್ಶವಾಗಬೇಕು’ ಎಂದೂ ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.