ADVERTISEMENT

ಗ್ರಾಮೀಣ ಸೇವೆ–ವೈದ್ಯರಿಗೆ ಸೌಲಭ್ಯ

ಬಿಎಂಸಿಆರ್‌ಐ ಪದವಿ ಪ್ರದಾನ ಸಮಾರಂಭ: ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 20:39 IST
Last Updated 16 ಫೆಬ್ರುವರಿ 2020, 20:39 IST
ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಾದ ಡಾ.ಡಿ.ಎಂ.ದೇವೇಂದ್ರ, ಡಾ.ಅರ್ಪಿತ್ ಶಾಂತಗಿರಿ, ಡಾ.ಶರೊನ್‌ ಫೆಡ್ರಿಕ್‌ ಲಸ್ರಾದೊ, ಡಾ.ಕೆ.ಸಂಜನಾ, ಡಾ.ಶ್ರವಂತಿ ನಾಯ್ಡು ಹಾಗೂ ಡಾ.ಡಿ.ಎನ್‌.ಮೇಘನಾ ಪರಸ್ಪರ ಶುಭ ಕೋರಿದರು –ಪ್ರಜಾವಾಣಿ ಚಿತ್ರ
ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಾದ ಡಾ.ಡಿ.ಎಂ.ದೇವೇಂದ್ರ, ಡಾ.ಅರ್ಪಿತ್ ಶಾಂತಗಿರಿ, ಡಾ.ಶರೊನ್‌ ಫೆಡ್ರಿಕ್‌ ಲಸ್ರಾದೊ, ಡಾ.ಕೆ.ಸಂಜನಾ, ಡಾ.ಶ್ರವಂತಿ ನಾಯ್ಡು ಹಾಗೂ ಡಾ.ಡಿ.ಎನ್‌.ಮೇಘನಾ ಪರಸ್ಪರ ಶುಭ ಕೋರಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಸರ್ಕಾರದ ವತಿಯಿಂದ ವಿಶೇಷ ಪ್ರೋತ್ಸಾಹ ಸಿಗುವಂತೆ ಮಾಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಇಲ್ಲಿನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ತೆರೆಯುವ ಆಸಕ್ತಿಯನ್ನು ಹೊಂದಿದೆ’ ಎಂದು ತಿಳಿಸಿದರು.

‘ಕೇವಲ ಹಣ ಸಂಪಾದನೆಗೆಂದು ನಮ್ಮ ವೃತ್ತಿಯನ್ನು ಮೀಸಲಿಡಬಾರದು. ವೈದ್ಯರು ರೋಗಿಗಳ ವಿಶ್ವಾಸ ಗಳಿಸಬೇಕು. ಮಾನವೀಯ ಮೌಲ್ಯ ಅರ್ಥೈಸಿಕೊಂಡು ವೃತ್ತಿ ನಿರ್ವಹಿಸಬೇಕು’ ಎಂದರು.

ADVERTISEMENT

ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಪಾಲ್ಗೊಂಡಿದ್ದರು.

*
ಆಯುಷ್ಮಾನ್‌ ಭಾರತ್ ಮೂಲಕ ಬಡ ಕುಟುಂಬಕ್ಕೆ ₹ 5 ಲಕ್ಷದವರೆಗೆ ವಿಮೆ ಪಡೆಯುವುದು ಸಾಧ್ಯವಾಗಿದೆ. ರಾಜ್ಯವೂ ಇದರಲ್ಲಿ ಕೈಜೋಡಿಸಿದೆ.
-ಡಾ.ಕೆ.ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.