ADVERTISEMENT

ಸಾಲುಮರದ ತಿಮ್ಮಕ್ಕಗೆ ‘ಜೀವ ಸಮೃದ್ಧಿ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 18:27 IST
Last Updated 8 ನವೆಂಬರ್ 2021, 18:27 IST
ಸಾಲುಮರದ ತಿಮ್ಮಕ್ಕ
ಸಾಲುಮರದ ತಿಮ್ಮಕ್ಕ   

ಬೆಂಗಳೂರು: ಕೇರಳದ ಸಮತಾ ಸಂಸ್ಥೆಯು 2020ನೇ ಸಾಲಿನ ಜೀವ ಸಮೃದ್ಧಿ ಪ್ರಶಸ್ತಿಗೆ ಸಾಲು ಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡಿದೆ.

ಈ ಪುರಸ್ಕಾರವನ್ನು ಸಮುದಾಯ ಕರ್ನಾಟಕ ಹಾಗೂ ಪುರೋಗಮನ ಕಲಾ ಸಾಹಿತ್ಯ ಸಂಘದ (ಪುಕಸ) ಸಹಯೋಗದಲ್ಲಿ ನೀಡಲಾಗುತ್ತಿದೆ.

ಖ್ಯಾತ ಪರಿಸರ ಕಾರ್ಯಕರ್ತೆ ಕೀನ್ಯಾದ ವಾಂಗಾರಿ ಮಾತಾಯಿಯವರ ಸ್ಮರಣೆಯಲ್ಲಿ ಈ ಪ್ರಶಸ್ತಿಯನ್ನು ಸಮತಾ ನೀಡುತ್ತಿದೆ. ನ. 10ರಂದು ಬೆಳಿಗ್ಗೆ 11ಕ್ಕೆ ತಿಮ್ಮಕ್ಕ ಅವರ ಮನೆಯಲ್ಲಿಯೇ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪುಕಸದ ಆರ್‌.ವಿ. ಆಚಾರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.