ADVERTISEMENT

₹1.5 ಕೋಟಿ ವಿದ್ಯಾರ್ಥಿವೇತನ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:32 IST
Last Updated 31 ಜುಲೈ 2019, 19:32 IST
ಡಿಸಿಪಿ ಇಶಾ ಪಂತ್‌ ಹಾಗೂ ಹುಸ್ನಾ ಜಿಯಾಉಲ್ಲಾ ಷರೀಫ್ ಅವರು ವಿದ್ಯಾರ್ಥಿನಿಯರಿಗೆ ಚೆಕ್‌ ವಿತರಿಸಿದರು. ಕಸ್ಟಮ್ಸ್ ವಿಭಾಗದ ಹೆಚ್ಚುವರಿ ಆಯುಕ್ತ ಹರ್ಷವರ್ಧನ್ ಉಮ್ರೆ ಇದ್ದಾರೆ
ಡಿಸಿಪಿ ಇಶಾ ಪಂತ್‌ ಹಾಗೂ ಹುಸ್ನಾ ಜಿಯಾಉಲ್ಲಾ ಷರೀಫ್ ಅವರು ವಿದ್ಯಾರ್ಥಿನಿಯರಿಗೆ ಚೆಕ್‌ ವಿತರಿಸಿದರು. ಕಸ್ಟಮ್ಸ್ ವಿಭಾಗದ ಹೆಚ್ಚುವರಿ ಆಯುಕ್ತ ಹರ್ಷವರ್ಧನ್ ಉಮ್ರೆ ಇದ್ದಾರೆ   

ಬೆಂಗಳೂರು:ಬಝಾಂ-ಎ-ನಿಸ್ವಾನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮುಸ್ಲಿಂ ಸಮುದಾಯದ 3,800 ಬಡ ವಿದ್ಯಾರ್ಥಿನಿಯರಿಗೆ ₹1.5 ಕೋಟಿ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು.

‘ಶಿಕ್ಷಣ ಮಹಿಳಾ ಸಬಲೀಕರಣದ ಒಂದು ಸಾಧನ. ವಿದ್ಯಾರ್ಥಿಗಳಿಗೆ ಶಿಕ್ಷಣ ಆಯುಧದಂತೆ ಬಲ ತುಂಬುತ್ತದೆ. ನಮಗೆ ಅಗತ್ಯವಾದದ್ದನ್ನು ಪಡೆಯಬೇಕಾದರೆ ಅದಕ್ಕಾಗಿ ಶ್ರಮಪಡಲೇಬೇಕು’ ಎಂದು ಡಿಸಿಪಿ (ದಕ್ಷಿಣ ವಿಭಾಗ) ಇಶಾ ಪಂತ್‌ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

‘ರಸ್ತೆಯಲ್ಲಿ ಹೋಗುವಾಗ ಪೊರ್ಕಿಗಳು ನಿಮ್ಮನ್ನು ಚುಡಾಯಿಸಿದರೆ, ಕಿರುಕುಳ ನೀಡಿದರೆ ಹಾಗೂ ಅಸಭ್ಯವಾಗಿ ವರ್ತಿಸಿದರೆ ಅದಕ್ಕೆ ಹೆದರಬೇಡಿ. ಧೈರ್ಯವಾಗಿ ಅವರನ್ನು ಎದುರಿಸಿ ಪಾಠ ಕಲಿಸಬೇಕು’ ಎಂದರು.

ADVERTISEMENT

ಟ್ರಸ್ಟ್‌ನ ಅಧ್ಯಕ್ಷೆ ಹುಸ್ನಾ ಜಿಯಾಉಲ್ಲಾ ಷರೀಫ್, ‘ಪದವಿಪೂರ್ವ ವಿದ್ಯಾರ್ಥಿನಿಯರಿಗೆ ₹3 ಸಾವಿರ, ಪದವಿ ಮತ್ತು ಸ್ನಾತಕೋತ್ತರ ಪದವಿ ಓದುವವರಿಗೆ ₹5 ಸಾವಿರ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ₹‌6 ಸಾವಿರ ಹಾಗೂ ವೈದ್ಯಕೀಯ ‌ವಿದ್ಯಾರ್ಥಿನಿಯರಿಗೆ ₹8 ಸಾವಿರ ವಿದ್ಯಾರ್ಥಿವೇತನ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.