ADVERTISEMENT

‘ಎಸ್‌ಟಿಗೆ ಸೇರ್ಪಡೆಗಾಗಿ ಹೋರಾಟ ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 20:23 IST
Last Updated 8 ಜುಲೈ 2019, 20:23 IST
ಸಭೆಯನ್ನು ಕೆ.ಎಂ.ರಾಮಚಂದ್ರಪ್ಪ ಉದ್ಘಾಟಿಸಿದರು. ಹಿರಿಯ ಉಪಾಧ್ಯಕ್ಷ ವೆಂಕಟೇಶ್ ಮೂರ್ತಿ, ಮುಖಂಡರಾದ ಆರ್. ರಾಮಕೃಷ್ಣಪ್ಪ, ಆರ್.ಪ್ರಭಾವತಿ, ಅಗರ ಆರ್. ಪ್ರಕಾಶ್, ಕೆ. ಕೆಂಪರಾಜು, ಕೃಷ್ಣಮೂರ್ತಿ, ರಾಮಾಂಜಿನೇಯ ಇದ್ದರು
ಸಭೆಯನ್ನು ಕೆ.ಎಂ.ರಾಮಚಂದ್ರಪ್ಪ ಉದ್ಘಾಟಿಸಿದರು. ಹಿರಿಯ ಉಪಾಧ್ಯಕ್ಷ ವೆಂಕಟೇಶ್ ಮೂರ್ತಿ, ಮುಖಂಡರಾದ ಆರ್. ರಾಮಕೃಷ್ಣಪ್ಪ, ಆರ್.ಪ್ರಭಾವತಿ, ಅಗರ ಆರ್. ಪ್ರಕಾಶ್, ಕೆ. ಕೆಂಪರಾಜು, ಕೃಷ್ಣಮೂರ್ತಿ, ರಾಮಾಂಜಿನೇಯ ಇದ್ದರು   

ಕೆ.ಆರ್.ಪುರ: ‘ಅತ್ಯಂತ ಹಿಂದುಳಿದಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಹೋರಾಟ ಆರಂಭಿಸುವ ಅನಿವಾರ್ಯತೆ ಇದೆ’ ಎಂದುಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ರಾಮಚಂದ್ರಪ್ಪ ಹೇಳಿದರು.

ಕೆ.ಆರ್.ಪುರದ ಮೇಡಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಸಂಘದ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.

‘ಹಿಂದುಳಿದಿರುವ ಇನ್ನೂರಕ್ಕೂ ಹೆಚ್ಚು ಜಾತಿಗಳಲ್ಲಿ ಕುರುಬ ಸಮಾಜವೂ ಒಂದು. ಮುಂದುವರಿದ ಸಮುದಾಯಗಳು ನಮ್ಮ ಹಕ್ಕು ಕಸಿದುಕೊಳ್ಳುತ್ತಿವೆ’ ಎಂದರು.

ADVERTISEMENT

‘ಉತ್ತರ ಕರ್ನಾಟಕದಲ್ಲಂತೂ ಕುರುಬ ಸಮಾಜದ ಜನ ಹೀನಾಯ ಸ್ಥಿತಿಯಲ್ಲಿದ್ದಾರೆ.ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಶೈಕ್ಷಣಿಕ, ಆರ್ಥಿಕ, ರಾಜಕೀಯ ಸವಲತ್ತುಗಳನ್ನು ದೊರಕಿಸಿಕೊಡಲು ಕುರುಬರ ಸಂಘದಿಂದ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.