ADVERTISEMENT

ಸಿದ್ದು ನಿಜಕನಸು ಕೃತಿ: ಪುರಭವನದ ಸುತ್ತ ಪೊಲೀಸ್ ಭದ್ರತೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 10:33 IST
Last Updated 9 ಜನವರಿ 2023, 10:33 IST
ಪುರಭವನದ ಸುತ್ತ ಪೊಲೀಸ್ ಭದ್ರತೆ
ಪುರಭವನದ ಸುತ್ತ ಪೊಲೀಸ್ ಭದ್ರತೆ   

ಬೆಂಗಳೂರು: ಸಿದ್ದು ನಿಜಕನಸು ಎಂಬ ಪುಸ್ತಕ ಬಿಡುಗಡೆ ಸಮಾರಂಭ ನಡೆಸಲು ನಿರ್ಧರಿಸಿರುವ ಪುರಭವನದ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲರನ್ನೂ ತಪಾಸಣೆ ನಡೆಸಿಯೇ ಪುರಭವನದ ಒಳಗೆ ಪ್ರವೇಶ ನೀಡಲಾಗುತ್ತಿದೆ.

ವಿಕೆಪಿ ಎಂಬುವವರು ಪುಸ್ತಕ ಬರೆದಿದ್ದಾರೆ. ಆ ಕೃತಿಯಲ್ಲಿ ಏನಿದೆ ಎಂಬುದು ನಮಗೂ ತಿಳಿದಿಲ್ಲ. ನಾಲ್ಕು ಗಂಟೆ ವೇಳೆಗೆ ಪುಸ್ತಕ ಬಿಡುಗಡೆ ಮಾಡಲಾಗುವುದು. ಕೃತಿ ಕುರಿತು ನಮಗೂ ಕುತೂಹಲವಿದೆ‌‌ ಎಂದು ಸ್ಥಳದಲ್ಲಿರುವ ಆಯೋಜಕ ಬಿಜೆಪಿಯ ಕೇಂದ್ರ ವಿಭಾಗದ ಪ್ರಧಾ‌ನ ಕಾರ್ಯದರ್ಶಿ ವಿಜೇಂದ್ರ ಹೇಳಿದರು.‌

ಇದಕ್ಕೂ ಮೊದಲು ಪುರಭವನದ ‌ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.