ಬೆಂಗಳೂರು: ಬೆಂಗಳೂರುಚರ್ಮರೋಗಶಾಸ್ತ್ರ ಸೊಸೈಟಿ ಇದೇ 17ರಿಂದ ಯಲಹಂಕ ಬಳಿಯ ಸಾದಾಹಳ್ಳಿಯಲ್ಲಿ ಮೂರು ದಿನಗಳ ಕಾಲಚರ್ಮರೋಗ ವೈದ್ಯರ ಸಮ್ಮೇಳನವನ್ನು ಆಯೋಜಿಸಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರಮಾತನಾಡಿದ ಚರ್ಮರೋಗ ತಜ್ಞರ ಸಂಘದ ಬೆಂಗಳೂರು ನಗರ ಘಟಕದಅಧ್ಯಕ್ಷ ಡಾ.ರಘುನಾಥ್ ರೆಡ್ಡಿ,‘ಚರ್ಮರೋಗಗಳ ಪರಿಣಾಮಗಳ ಕುರಿತು ಸಮ್ಮೇಳನದಲ್ಲಿತಜ್ಞರಿಗೆ ಅರಿವು ಮೂಡಿಸಲಾಗುತ್ತದೆ.21 ರಾಷ್ಟ್ರಗಳ ಚರ್ಮಶಾಸ್ತ್ರ ಸಂಘಗಳ ಅಧ್ಯಕ್ಷರು ಮತ್ತು 80 ಜನ ಅಂತರರಾಷ್ಟ್ರೀಯ ಭಾಷಣಕಾರರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
‘ಚರ್ಮರೋಗಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಚರ್ಮರಥ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.ಡಿ.21ರಂದು ನವದೆಹಲಿಯಿಂದ ಸಂಚಾರವನ್ನು ಆರಂಭಿಸಿದ ಈ ಯಾತ್ರೆ ದೇಶದಾದ್ಯಂತ ಸಂಚರಿಸಲಿದೆ. ಜ.16ರಂದು ಬೆಂಗಳೂರಿಗೆ ಬರಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.