ಬೆಂಗಳೂರು:‘ಸ್ಪೈಸಿ ಭೋಜನಂ’ ರೆಸ್ಟೋರೆಂಟ್ನ ನೂತನ ಶಾಖೆಯನ್ನು ನಗರದ ವಸಂತಪುರ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ತೆರೆಯಲಾಯಿತು.
ಶಾಖೆ ಉದ್ಘಾಟಿಸಿ ಮಾತನಾಡಿದ ರೆಸ್ಟೋರೆಂಟ್ ಮಾಲೀಕರಾದ ಸ್ವಪ್ನಾ ಅರುಣ್,‘ ನಮ್ಮದು ನಾಟಿ ಸ್ಟೈಲ್ ಮತ್ತು ಪರಿಸರಸ್ನೇಹಿ ಅಡುಗೆಗಳು. ಮಣ್ಣಿನ ಮಡಿಕೆಗಳಲ್ಲೇಹಂಡಿ ಬಿರಿಯಾನಿ ತಯಾರಿ ನಮ್ಮ ವಿಶೇಷ. ಮಾಂಸಾಹಾರ ಪ್ರಿಯರಿಗೆ ಒಂದೇ ಕಡೆ ಮಂಗಳೂರು, ಆಂಧ್ರ ಹಾಗೂ ಚೆಟ್ಟಿನಾಡು ಶೈಲಿಯ ಬಿರಿಯಾನಿ ಸವಿಯುವ ಅವಕಾಶ ಕಲ್ಪಿಸಿದ್ದೇವೆ’ ಎಂದರು.
‘ಕುಂಬಳಗೋಡಿನಲ್ಲಿರುವ ಆಹಾರ ತಯಾರಿ ಘಟಕದಿಂದ ಎಲ್ಲ ಶಾಖೆಗಳಿಗೆ ಆಹಾರ ಪೂರೈಕೆಯಾಗುತ್ತದೆ. ನಗರದಲ್ಲಿ 40 ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.