ADVERTISEMENT

ಸಂತ ಫ್ರಾನ್ಸಿಸ್ ಕಾಲೇಜ್‌: ಅದ್ದೂರಿ ಕನ್ನಡ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 14:22 IST
Last Updated 12 ನವೆಂಬರ್ 2022, 14:22 IST
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ   

ಬೆಂಗಳೂರು: ನಿರ್ದೇಶಕಟಿ.ಎಸ್.ನಾಗಾಭರಣ ಅವರು ವಿದ್ಯಾರ್ಥಿಗಳಲ್ಲಿ "ಕನ್ನಡ ಉಳಿಸಿ ಕನ್ನಡ ಬೆಳೆಸಿ” ಎಂಬ ಘೋಷ ವಾಕ್ಯವನ್ನು ಉಚ್ಚರಿಸಿ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹರ್ಷೋದ್ಗಾರವನ್ನು ಉಂಟು ಮಾಡಿದರು.

ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿಕನ್ನಡ ವಿಭಾಗದ ‘ಚಿನ್ನುಡಿ‘ ಕನ್ನಡ ಸಂಘ ಹಾಗೂ ಸಾಂಸ್ಕೃತಿಕ ಸಮಿತಿಯ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸಂತೋಷ್‌ ಕುಮಾರ್.ಆರ್.ಎಂ ಹಾಗೂ ಸಹಪಾಠಿ ವೃಂದದವರಶ್ರಮದ ಪ್ರತಿಫಲವಾಗಿ ಈ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿಬಂತು.

ADVERTISEMENT

ಡಾ.ಮಳಲಿಗೌಡ,ಡಾ.ಬೆಳಗೆರೆ ಲಿಂಗರಾಜಯ್ಯ,ಗೌರವಾನ್ವಿತ ಬ್ರದರ್ ಪೀಟರ್,ಪ್ರಾಂಶುಪಾಲರಾದ ಡಾ. ಆರ್ ಎನ್ ಸುಬ್ಬರಾವ್,ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸಂತೋಷ್‌ ಕುಮಾರ್‌ ಆರ್.ಎಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.