ADVERTISEMENT

ಕೃಷಿ ಅಧಿಕಾರಿ ಕೊಲೆಗೆ ಯತ್ನ ಯುವಕ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 20:26 IST
Last Updated 26 ಅಕ್ಟೋಬರ್ 2019, 20:26 IST
ಆರೋಪಿ ಕಾರ್ತಿಕ್
ಆರೋಪಿ ಕಾರ್ತಿಕ್   

ಕೊಳ್ಳೇಗಾಲ: ನಗರದ ಚಿಕ್ಕರಂಗನಾಥನ ಕೆರೆಯಲ್ಲಿ ಮುಳುಗಿಸಿ ಕೃಷಿ ಅಧಿಕಾರಿ ಜಯಲಕ್ಷ್ಮಿ ಅವರ ಕೊಲೆಗೆ ಯತ್ನಿಸಿದ ಯುವಕನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಸಿದ್ದಲಿಂಗಪುರದ ಬಸ್ ಕ್ಲೀನರ್ ಕಾರ್ತಿಕ್ (28) ಬಂಧಿತ ಆರೋಪಿ.

ಬೆಂಗಳೂರಿನ ಜಯಲಕ್ಷ್ಮಿ ಅವರು ಲೊಕ್ಕನಹಳ್ಳಿ ಹೋಬಳಿ ಕೃಷಿ ಅಧಿಕಾರಿಯಾಗಿ ಆರು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದರು. ಅವರು ಎಂದಿನಂತೆ ಕಚೇರಿ ಕೆಲಸ ಮುಗಿಸಿ ಜೆ.ಎಸ್.ಎಸ್ ಕಾಲೇಜಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೂಲಕ ತಮ್ಮ ನಿವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿಸಿ ಕೊಲ್ಲಲು ಯತ್ನಿಸಿದ್ದಾನೆ.

ಜಯಲಕ್ಷ್ಮಿ ಅವರ ಚೀರಾಟ ಕೇಳಿ ಅಲ್ಲಿಗೆ ಬಂದ ಸ್ಥಳೀಯರು ರಕ್ಷಿಸಿದ್ದಾರೆ. ಕಾರ್ತಿಕ್‌ನನ್ನು ಹಿಡಿದುಪೊಲೀಸರಿಗೆ ಒಪ್ಪಿಸಿದ್ದಾರೆ.

ADVERTISEMENT

ಪಾನಮತ್ತನಾಗಿದ್ದ ಕಾರ್ತಿಕ್, ’ಜಯಲಕ್ಷ್ಮಿ ನೀರಿನಲ್ಲಿ ಬಿದ್ದಿದ್ದರು. ಅವರನ್ನು ಕಾಪಾಡಲು ಹೋದೆ‘ ಎಂದು ವಾದಿಸಿದ್ದಾನೆ. ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಜಯಲಕ್ಷ್ಮಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.