ADVERTISEMENT

ಬೆಂಗಳೂರಿನಲ್ಲಿ ದುಬಾರಿ ಬೆಲೆಗೆ ಆಮ್ಲಜನಕ ಸಿಲಿಂಡರ್ ಮಾರಾಟ: ವ್ಯವಸ್ಥಾಪಕ ಬಂಧನ

​ಪ್ರಜಾವಾಣಿ ವಾರ್ತೆ
Published 8 ಮೇ 2021, 3:51 IST
Last Updated 8 ಮೇ 2021, 3:51 IST
ರವಿಕುಮಾರ್‌
ರವಿಕುಮಾರ್‌   

ಬೆಂಗಳೂರು: ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ದುಬಾರಿ ಬೆಲೆಗೆ ಆಮ್ಲಜನಕ ಸಿಲಿಂಡರ್ ಮಾರುತ್ತಿದ್ದ ಆರೋಪದಡಿ ‘ಸಿಗಾ‌ ಗ್ಯಾಸಸ್’ ವ್ಯವಸ್ಥಾಪಕ ರವಿಕುಮಾರ್‌ನನ್ನು (36) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಿಗಾ ಗ್ಯಾಸಸ್ ಘಟಕವಿದೆ. ಅಲ್ಲಿ‌ಯೇ‌ ನಿತ್ಯವೂ ದುಬಾರಿ ಬೆಲೆಗೆ ಆಮ್ಲಜನಕ ಸಿಲಿಂಡರ್ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಶುಕ್ರವಾರ ರಾತ್ರಿ ದಾಳಿ ಮಾಡಲಾಯಿತು’ ಎಂದು ಸಿಸಿಬಿ‌‌ ಪೊಲೀಸರು ಹೇಳಿದರು.

‘47 ಲೀಟರ್ ಸಿಲಿಂಡರ್‌ಗೆ ₹3,000 ನಿಗದಿಪಡಿಸಲಾಗಿದೆ. ಆದರೆ, ಅದೇ ಸಿಲಿಂಡರ್‌‌ನ್ನು ₹6,000 ಮಾರಾಟ ಮಾಡಲಾಗುತ್ತಿತ್ತು. ಆರೋಪಿ ವಿರುದ್ಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT