ADVERTISEMENT

ಕಿಟಕಿಯಲ್ಲಿಟ್ಟಿದ್ದ ಕೀ ಬಳಸಿ ಕಳ್ಳತನ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 6:34 IST
Last Updated 9 ಜುಲೈ 2022, 6:34 IST

ಬೆಂಗಳೂರು: ಮಾಲೀಕರು ನಿತ್ಯವೂ ಕಿಟಕಿಯಲ್ಲಿರಿಸುತ್ತಿದ್ದ ಬೀಗದ ಕೀ ಗಮನಿಸಿದ್ದ ಕಳ್ಳರು, ಅದೇ ಕೀ ಬಳಸಿ ಚಿನ್ನಾಭರಣ ಹಾಗೂ ನಗದು ಕದ್ದೊಯ್ದಿದ್ದಾರೆ. ಈ ಕಳ್ಳತನ ಸಂಬಂಧ ಆರ್‌.ಎಂ.ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗೊರಗುಂಟೆಪಾಳ್ಯ ಬಳಿಯ ನಿವಾಸಿ ಕೃಷ್ಣ ಎಂಬುವರ ಮನೆಯಲ್ಲಿ ಗುರುವಾರ ಕಳ್ಳತನ ಆಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮನೆಯಿಂದ ಹೊರಗೆ ಹೋಗುವಾಗ ದೂರುದಾರ ಬೀಗ ಹಾಕಿ ಕೀಯನ್ನು ಕಿಟಕಿ ಬಳಿ ಇಟ್ಟು ಹೋಗುತ್ತಿದ್ದರು. ಗುರುವಾರವೂ ಕಿಟಕಿಯಲ್ಲಿ ಕೀ ಇಟ್ಟು ಕೆಲಸಕ್ಕೆ ಹೋಗಿದ್ದರು. ಇದನ್ನು ಗಮನಿಸಿದ್ದ ಕಳ್ಳರು, ಅದೇ ಕೀ ಬಳಸಿ ಬೀಗ ತೆರೆದು ಮನೆಯೊಳಗೆ ನುಗ್ಗಿದ್ದರು. ಚಿನ್ನಾಭರಣ ಹಾಗೂ ₹ 50 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ’ ಎಂದೂ ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.