ಬೆಂಗಳೂರು: ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ನೀಡುವ ‘ಚಿತ್ರಕಲಾ ಪ್ರಶಸ್ತಿ’ಗೆ ಚಿತ್ರಕಲಾವಿದ ಬಿ.ಆರ್.ಕೊರ್ತಿ ಮತ್ತು ‘ಜಾನಪದ ಕಲಾ ಪ್ರಶಸ್ತಿ’ಗೆ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಆಯ್ಕೆಯಾಗಿದ್ದಾರೆ.
₹25 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕವನ್ನು ಪ್ರಶಸ್ತಿಯು ಒಳಗೊಂಡಿದೆ. ಮೈಸೂರಿನ ಶ್ರೀಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಸೆ.5ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನ ತಿಳಿಸಿದೆ. ಬಿ.ಆರ್.ಕೊರ್ತಿ ಅವರು ಜಲವರ್ಣದಲ್ಲಿ ಸಿದ್ಧಹಸ್ತರು. ಬಳ್ಳಾರಿ ಜಿಲ್ಲೆಯ ಮಂಜಮ್ಮ ಜೋಗತಿ ಅವರು ಜೋಗತಿ ನೃತ್ಯ ಕಲಾತಂಡ ರಚಿಸಿಕೊಂಡು ಕಲಾಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.