ADVERTISEMENT

ರೈಲ್ವೆ ಹುದ್ದೆ ಭರವಸೆ ನೀಡಿ ₹ 6.50 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 19:27 IST
Last Updated 21 ಜುಲೈ 2019, 19:27 IST

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಸೂಪರ್‌ವೈಸರ್‌ ಕೆಲಸ ಕೊಡಿಸುವ ಭರವಸೆ ನೀಡಿ ಉದ್ಯೋಗ ಆಕಾಂಕ್ಷಿಯೊ
ಬ್ಬರಿಗೆ ₹ 6.50 ಲಕ್ಷ ‍ವಂಚಿಸಿದ ಪ್ರಕರಣ ವಿವೇಕನಗರ ಠಾಣೆಯಲ್ಲಿ ದಾಖಲಾಗಿದೆ.

ಸಂಜಯನಗರ ನಿವಾಸಿ ಜಿ.ಆರ್‌. ನವೀನ್‌ ಎಂಬುವವರ ವಿರುದ್ಧ ವಂಚನೆಗೆ ಒಳಗಾದ ಆಸ್ಟಿನ್‌ ಟೌನ್‌ ನಿವಾಸಿ ಸಂಪತ್‌ ದೂರು ನೀಡಿದ್ದಾರೆ.

‘ಫೆಬ್ರುವರಿ ತಿಂಗಳಲ್ಲಿ ರೈಲ್ವೆ ಇಲಾಖೆಯ ವಿವಿಧ ಹುದ್ದೆ ನೇಮಕಾತಿಗೆ ಆಯ್ಕೆ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ ಹಾಜರಾಗಲು ನಾನು ಯಶವಂತಪುರಕ್ಕೆ ಹೋಗಿದ್ದಾಗ, ರೈಲ್ವೆಯಲ್ಲಿ ಸೂಪರ್‌ವೈಸರ್‌ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ ನವೀನ್‌, ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿದ್ದರು. ಬಳಿಕ ನನ್ನ ಮಾವನವರ ಜೊತೆಗೂ ಮಾತನಾಡಿದ್ದ ನವೀನ್‌ 15 ದಿನಗಳ ಬಳಿಕ ನನ್ನ ಮನೆಗೆ ಬಂದು ₹ 6.50 ಲಕ್ಷ ತೆಗೆದುಕೊಂಡು ಹೋಗಿದ್ದಾನೆ. ನಂತರ ಉದ್ಯೋಗದ ಬಗ್ಗೆ ವಿಚಾರಿಸಿದಾಗ, ಇಂದು ಮಾಡಿಕೊಡುತ್ತೇನೆ, ನಾಳೆ ಮಾಡಿಕೊಡುತ್ತೇನೆ ಎಂದು ಸಬೂಬು ಹೇಳುತ್ತಿದ್ದಾನೆ. ಕೆಲವು ದಿನಗಳಿಂದ ನವೀನ್‌ ಅವರ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.