ADVERTISEMENT

ವಚನಗಳು ವೈಚಾರಿಕತೆಯ ಪ್ರತಿಬಿಂಬ: ಎಸ್. ಪಿನಾಕಪಾಣಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 15:12 IST
Last Updated 11 ಆಗಸ್ಟ್ 2024, 15:12 IST
<div class="paragraphs"><p>ಪ್ರಾತಿನಿಧಿಕ ಚಿತ್ರೆ</p></div>

ಪ್ರಾತಿನಿಧಿಕ ಚಿತ್ರೆ

   

ಬೆಂಗಳೂರು: ‘ವಚನಗಳು ಕಥೆ ಪುರಾಣಗಳಲ್ಲ; ವೈಚಾರಿಕತೆಯ ಪ್ರತಿಬಿಂಬ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ತಿಳಿಸಿದರು.

ಸಂಪಂಗಿರಾಮನಗರದಲ್ಲಿ ವೀರಶೈವ ಸದ್ಧರ್ಮ ವರ್ಧಿನಿ ಸಂಘ ಆಯೋಜಿಸಿದ್ದ ವಚನ ಶ್ರಾವಣದಲ್ಲಿ ಅವರು ಉಪನ್ಯಾಸ ನೀಡಿದರು.

ADVERTISEMENT

ವಿಚಾರಶೀಲತೆಯೇ ವಚನಗಳ ಮೂಲ ಲಕ್ಷಣವಾಗಿದೆ. ವೈಚಾರಿಕ ನೆಲೆಗಟ್ಟಿನಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡಿದ ಬಸವಣ್ಣನವರು ಸ್ತ್ರೀ ಸಮಾನತೆಯನ್ನು ಆಚರಣೆಗೆ ತಂದರು. ಶೋಷಿತರನ್ನು ಅಪ್ಪಿಕೊಂಡು, ಒಪ್ಪಿಕೊಂಡು ಜೊತೆಗೆ ಕರೆದುಕೊಂಡು ನಡೆದ ಮಹಾತ್ಮರು ಎಂದು ಬಣ್ಣಿಸಿದರು.

ವಚನ ಗಾಯನ ಸ್ಪರ್ಧೆಯಲ್ಲಿ ಅತಿ ಹೆಚ್ಚು ವಚನಗಳನ್ನು ಹಾಡುವ ಸ್ಪರ್ಧೆಯಲ್ಲಿ ಸರ್ವಾಣಿ ಪ್ರಥಮ, ಶ್ರುತಿ ದ್ವಿತೀಯ, ಜೀವಿತಾ ತೃತೀಯ ಬಹುಮಾನ ಪಡೆದರು. ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 

ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಸಂಘದ ಅಧ್ಯಕ್ಷ ಶಿವಪ್ಪ, ಪದಾಧಿಕಾರಿಗಳಾದ ಗೌರಿಶಂಕರ್, ಪಂಚಾಕ್ಷರಿ, ಗುರುಪ್ರಸಾದ್, ರುದ್ರಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.