ADVERTISEMENT

ಅಹಿಂಸೆ, ಸರಳತೆಯಿಂದ ಬದುಕು ಪರಿಪೂರ್ಣ: ರಾಜ್ಯಪಾಲ ವಜೂಭಾಯಿ ವಾಲಾ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 19:57 IST
Last Updated 30 ಜೂನ್ 2019, 19:57 IST
ಜೈನ ಮುನಿ ಆಚಾರ್ಯ ಮಹಾಶ್ರಮಣಜಿ ಆಶೀರ್ವಚನ ನೀಡಿದರು. ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜ್ಯಪಾಲ ವಾಜುಭಾಯಿ ವಾಲಾ ಇದ್ದಾರೆ –ಪ್ರಜಾವಾಣಿ ಚಿತ್ರ
ಜೈನ ಮುನಿ ಆಚಾರ್ಯ ಮಹಾಶ್ರಮಣಜಿ ಆಶೀರ್ವಚನ ನೀಡಿದರು. ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜ್ಯಪಾಲ ವಾಜುಭಾಯಿ ವಾಲಾ ಇದ್ದಾರೆ –ಪ್ರಜಾವಾಣಿ ಚಿತ್ರ   

ನೆಲಮಂಗಲ: ‘ಭಗವಾನ್‌ ಮಹಾವೀರರ ಸಂದೇಶ ಮತ್ತು ಜೈನ ಧರ್ಮದ ಅಹಿಂಸೆ, ಸರಳತೆಯನ್ನು ಅಳವಡಿಸಿಕೊಂಡರೆ ಬದುಕು ಪರಿಪೂರ್ಣವಾಗುತ್ತದೆ’ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಅಡಕಮಾರನಹಳ್ಳಿಯ ಭಿಕ್ಷುಧಾಮದಲ್ಲಿ ಭಾನುವಾರ ಆಯೋಜಿಸಿದ್ದ ಆಚಾರ್ಯ ಮಹಾಪ್ರಾಗ್ಯರ ಜನ್ಮಶತಮಾನೋತ್ಸವದಲ್ಲಿ ಮಾತನಾಡಿದರು.

ಆಚಾರ್ಯ ಮಹಾಶ್ರಮಣಜಿ ಅವರ ಬರಹಗಳ ಕನ್ನಡಾನುವಾದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದಕಾಂಗ್ರೆಸ್‌ನ ಹಿರಿಯ ಮುಖಂಡ ಶಿವರಾಜ ಪಾಟೀಲ,‘ಸಾಮರಸ್ಯ, ನೈತಿಕತೆ, ವ್ಯಸನ ಮುಕ್ತ ಎಂಬ ಮೂರು ಅಹಿಂಸಾ ಧ್ಯೇಯ ಇಟ್ಟುಕೊಂಡು ದೇಶ–ವಿದೇಶಗಳಲ್ಲಿ ಮಹಾಶ್ರಮಣಜಿ ಅವರು ಸಂಚರಿಸುತ್ತಿದ್ದಾರೆ. 19 ಸಾವಿರ ಕಿಲೋ ಮೀಟರ್ ಅಹಿಂಸಾ ಯಾತ್ರೆ ನಡೆಸಿ ಲಕ್ಷಾಂತರ ಭಕ್ತರಿಗೆ ಪ್ರವಚನ ನೀಡಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.