ಬೆಂಗಳೂರು: ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಕಾರ್ಯದಲ್ಲಿ ‘ಬೌನ್ಸ್’ ಸಂಸ್ಥೆ ತೊಡಗಿಕೊಂಡಿದೆ.
‘ಬೌನ್ಸ್’ನ ಪ್ರತಿನಿಧಿಗಳು, ಜೈನ್ ಕಾಲೇಜ್, ಕ್ರೈಸ್ಟ್ ಕಾಲೇಜು ಹಾಗೂ ವಿವಿಧ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವದ ಬಗ್ಗೆ ತಿಳುವಳಿಕೆ ನೀಡಿದರು.
ಚುನಾವಣೆಯಲ್ಲಿ ಯುವ ಜನತೆ ಸಂಪೂರ್ಣವಾಗಿ ಮತದಾನ ಮಾಡಿದರೆ ಬದಲಾವಣೆ ಸಾಧ್ಯವಾಗಲಿದೆ. ಹೀಗಾಗಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ‘ಬೌನ್ಸ್’ನ ಸಹಸಂಸ್ಥಾಪಕ ಎಚ್.ಆರ್. ವಿವೇಕಾನಂದ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.