ADVERTISEMENT

ಶೀಲ ಶಂಕಿಸಿ ಪತ್ನಿ ಕೊಲೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 20:40 IST
Last Updated 23 ಆಗಸ್ಟ್ 2022, 20:40 IST

ಬೆಂಗಳೂರು: ಶೀಲ ಶಂಕಿಸಿ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಕೆ.ಆರ್.ಪುರದ ಟಿ.ಸಿ.ಪಾಳ್ಯದಲ್ಲಿ ಮಂಗಳವಾರ ನಡೆದಿದೆ.

ಕೆ.ಆರ್.ಪುರದ ಟಿ.ಸಿ.ಪಾಳ್ಯ ನಿವಾಸಿ ನೈಸಿ ಫೋರಾ(32) ಕೊಲೆಯಾದ ಮಹಿಳೆ. ಈಕೆಯ ಪತಿ ಜಾನ್ ಸುಪ್ರೀತ್ ಎಂಬಾತನನ್ನು (34) ಬಂಧಿಸಲಾಗಿದೆ.

ಜಾನ್ ಸುಪ್ರೀತ್‌ ನಗರದಲ್ಲಿ ಟೆಂಟ್ ಶಾಮಿಯಾನ ವ್ಯವಹಾರ ಮಾಡಿಕೊಂಡಿದ್ದ. 8 ವರ್ಷಗಳ ಹಿಂದೆ ನೈಸಿಯನ್ನು ಮದುವೆಯಾಗಿದ್ದ. ಟಿ.ಸಿಪಾಳ್ಯದಲ್ಲಿರುವ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಪತ್ನಿಯ ಶೀಲ ಶಂಕಿಸಿ‌ ಮನೆಯಲ್ಲಿ ಜಾನ್ ಗಲಾಟೆ ಮಾಡುತ್ತಿದ್ದ. ಮಂಗಳವಾರ ಗಲಾಟೆ ನಡೆದು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.