ADVERTISEMENT

ಪ್ರೀತಿ ವಿಚಾರ: ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿದ‌ ಯುವಕ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 5:59 IST
Last Updated 28 ಏಪ್ರಿಲ್ 2022, 5:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಯುವತಿಯೊಬ್ಬರ ಮೇಲೆ‌ ಆ್ಯಸಿಡ್ ಎರಚಲಾಗಿದ್ದು, ಗಾಯಗೊಂಡಿರುವ ಯುವತಿ‌ಯನ್ನು ವಿಕ್ಟೋರಿಯಾ ಆಸ್ಪತ್ರೆಗೆ‌ ದಾಖಲಿಸಲಾಗಿದೆ.

ಫೈನಾನ್ಸ್ ಕಂಪನಿ‌ ಕಚೇರಿಯೊಂದರ ಬಳಿ‌ ಈ ಘಟನೆ ನಡೆದಿದೆ. ಯುವತಿ ಆರೋಗ್ಯದಲ್ಲಿ‌ ಚೇತರಿಕೆ ಕಂಡುಬಂದಿದೆ.

'ಪ್ರೀತಿ‌ ವಿಚಾರವಾಗಿ‌ ಯುವಕನೊಬ್ಬ ಯುವತಿ‌ ಹಿಂದೆ‌ ಬಿದ್ದಿದೆ. ಇದೇ‌ ವಿಚಾರವಾಗಿ‌ ಪರಸ್ಪರ‌ ಗಲಾಟೆಯೂ ಆಗಿತ್ತು. ಅದೇ ಕೋಪದಲ್ಲೇ ಯುವಕ, ಗುರುವಾರ ಬೆಳಿಗ್ಗೆ ಯುವತಿ‌ ಮೇಲೆ ಆ್ಯಸಿಡ್ ಎರಚಿ‌ದ್ದಾನೆ' ಎಂದು ಪೊಲೀಸರು ಹೇಳಿದರು.

ADVERTISEMENT

'ಯುವಕ‌ ಹಾಗೂ ಯುವತಿ‌‌ ಪರಿಚಯಸ್ಥರು. ಯುವತಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.