ಬೆಂಗಳೂರು: ಜೀ ಕನ್ನಡ ವಾಹಿನಿ ಆಯೋಜಿಸುವ ‘ಸರಿಗಮಪ ಲಿಟಲ್ ಚಾಂಪ್ಸ್’ನ 16ನೇ ಆವೃತ್ತಿಗೆ ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡುವ ಕೆಲಸ ಪೂರ್ಣಗೊಂಡಿದೆ ಎಂದು ಜೀ ವಾಹಿನಿ ತಿಳಿಸಿದೆ.
ಮೂರು ತಂಡಗಳಲ್ಲಿ ನಿರ್ಣಾ ಯಕರು ರಾಜ್ಯದ ಮೂವತ್ತೂ ಜಿಲ್ಲೆಗಳಲ್ಲಿ ಸಂಚರಿಸಿ, ಸಾವಿರಾರು ಸ್ಪರ್ಧಿಗಳ ಧ್ವನಿಗಳನ್ನು ಆಲಿಸಿ, 5 ರಿಂದ 14 ವರ್ಷದೊಳಗಿನ 30 ಗಾಯಕರನ್ನು ಆಯ್ಕೆ ಮಾಡಿದ್ದಾರೆ.
ಹಿಂದಿನ ಆವೃತ್ತಿಯ ನಿರ್ಣಾ ಯಕರೇ ಸರಿಗಮಪದ 16ನೇ ಆವೃತ್ತಿಯಲ್ಲೂ ನಿರ್ಣಾಯಕರಾಗಿಕಾಣಿಸಲಿದ್ದಾರಂತೆ. ನಾದಬ್ರಹ್ಮ ಹಂಸ
ಲೇಖ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಗಾಯಕರಾದ ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು 16ನೇ ಆವೃತ್ತಿಯಲ್ಲೂ ಕಾಣಿಸುವರು. ಅನುಶ್ರೀ ಅವರೇ ಈ ಬಾರಿಯ ರ್ಯಕ್ರಮವನ್ನೂನಿರೂಪಿಸಲಿದ್ದಾರೆ.
ಮಾರ್ಚ್ 2ರಿಂದ ಆರಂಭವಾಗಿ ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಜೀ ವಾಹಿನಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.