ADVERTISEMENT

ಜನವಾಡ: 50 ಕೆ.ಜಿ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 2:51 IST
Last Updated 2 ಅಕ್ಟೋಬರ್ 2020, 2:51 IST
ಬೀದರ್ ತಾಲ್ಲೂಕಿನ ನವಲಸಪುರ ಕ್ರಾಸ್ ಸಮೀಪ ಜನವಾಡ ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾ
ಬೀದರ್ ತಾಲ್ಲೂಕಿನ ನವಲಸಪುರ ಕ್ರಾಸ್ ಸಮೀಪ ಜನವಾಡ ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾ   

ಜನವಾಡ: ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹5 ಲಕ್ಷ ಮೌಲ್ಯದ 50 ಕೆ.ಜಿ. ಗಾಂಜಾವನ್ನು ಪೊಲೀಸರು ಬೀದರ್- ವಡಗಾಂವ್ ಮುಖ್ಯ ರಸ್ತೆಯ ಬೀದರ್ ತಾಲ್ಲೂಕಿನ ನವಲಸಪುರ ಕ್ರಾಸ್ ಹತ್ತಿರ ಗುರುವಾರ ವಶಪಡಿಸಿಕೊಂಡಿದ್ದಾರೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಂಡಾಪುರ ಮಂಡಲದ ದಬಕುಂಟಾ ತಾಂಡಾದ ದೇವಿದಾಸ ಲಕ್ಷ್ಮಣ ರಾಠೋಡ್ ಎಂಬಾತನನ್ನು ಬಂಧಿಸಿದ್ದು, ಕಾರ್ ವಶಕ್ಕೆ ತೆಗೆದುಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಜನವಾಡ ಪಿಎಸ್‍ಐ ಶಿವರಾಜ ಪಾಟೀಲ, ಸಿಬ್ಬಂದಿ ರಾಜು, ರವೀಂದ್ರ ಸಪಾಟೆ, ಪ್ರಭಾಕರ, ಬಾಬುಶೆಟ್ಟಿ, ಇಸ್ಮಾಯಿಲ್ ಹಾಗೂ ಜೀಪ್ ಚಾಲಕ ಪ್ರಭಾಕರ ಈ ದಾಳಿ ನಡೆಸಿದ್ದಾರೆ.

ADVERTISEMENT

ತೆಲಂಗಾಣದ ಸಂಗಾರೆಡ್ಡಿ ಕಡೆಯಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಣೆ ಮಾಡಲಾಗುತ್ತಿತ್ತು. ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.