ಭಾಲ್ಕಿ: ಇಲ್ಲಿಯ ಚನ್ನಬಸವಾಶ್ರಮದಲ್ಲಿ ಸೋಮವಾರ ವಿಶ್ವ ಲೋಕತಂತ್ರ ಮಹಾಲಯ, ಲಿಂಗಾಯತ ಸ್ವತಂತ್ರ ಧರ್ಮ ಸಮನ್ವಯ ಸಮಿತಿಯ ಸಂಯುಕ್ತಾಶ್ರಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗಾಗಿ ಸಹಿ ಸಂಗ್ರಹ ಆಂದೋಲನಕ್ಕೆ ವಿಶ್ವ ಲೋಕತಂತ್ರ ಮಹಾಲಯ ಸಂಸ್ಥಾಪಕ ಓಂಪ್ರಕಾಶ ರೊಟ್ಟೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಎಲ್ಲಾ ಗ್ರಾಮಗಳ ಸಾರ್ವಜನಿಕರಲ್ಲಿ ಸ್ವತಂತ್ರ ಧರ್ಮದ ಮಾನ್ಯತೆ ಬಗ್ಗೆ ಜಾಗೃತಿ ಮೂಡಿಸಿ, ಸಹಿ ಸಂಗ್ರಹಿಸಲಾಗುವುದು ಎಂದು ಹೇಳಿದರು.
ಬಸವರಾಜ ವೀರಶೆಟ್ಟಿ ಕರಡ್ಯಾಳ, ಪ್ರದೀಪ ಹೂಗಾರ ಜೊಳದಪಕಾ, ಶಾಂತಕುಮಾರ ಉಚ್ಚೆ ಸಿದ್ದೇಶ್ವರ, ಸಿದ್ರಾಮಪ್ಪ ಧೂಳೆ ದಾಡಗಿ, ವಿಶ್ವನಾಥ ಬಿರಾದಾರ ಲಾಧಾ, ನಾಗಯ್ಯಾ ಸ್ವಾಮಿ ಸಿದ್ದೇಶ್ವರ, ಷಣ್ಮುಖಯ್ಯಾ ಮಠಪತಿ, ಕಲ್ಯಾಣರಾವ ಕನಕಟ್ಟೆ, ಶ್ರೀಕಾಂತ ಭೊರಾಳೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.