ADVERTISEMENT

ಬೀದರ್‌: 72 ಕೆಜಿ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 5:07 IST
Last Updated 20 ಡಿಸೆಂಬರ್ 2020, 5:07 IST
ಬಸವಕಲ್ಯಾಣದಲ್ಲಿ ಶನಿವಾರ ವಶಪಡಿಸಿಕೊಂಡ ಗಾಂಜಾದ ಪ್ಯಾಕೆಟ್‌ಗಳೊಂದಿಗೆ ಬೀದರ್ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಸಿಪಿಐ ಹಾಗೂ ಸಬ್ ಇನ್ ಸ್ಪೇಕ್ಟರ್ ಅವರು ಇದ್ದಾರೆ
ಬಸವಕಲ್ಯಾಣದಲ್ಲಿ ಶನಿವಾರ ವಶಪಡಿಸಿಕೊಂಡ ಗಾಂಜಾದ ಪ್ಯಾಕೆಟ್‌ಗಳೊಂದಿಗೆ ಬೀದರ್ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಸಿಪಿಐ ಹಾಗೂ ಸಬ್ ಇನ್ ಸ್ಪೇಕ್ಟರ್ ಅವರು ಇದ್ದಾರೆ   

ಬಸವಕಲ್ಯಾಣ: ಇಲ್ಲಿಗೆ ಸಮೀಪದ ಸಸ್ತಾಪುರ ಬಂಗ್ಲಾ ಹತ್ತಿರದಲ್ಲಿ ನಗರ ಠಾಣೆ ಪೊಲೀಸರು ದಾಳಿ ನಡೆಸಿ ₹ 5.4 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿ ಕೊಂಡು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಟ್ಟು 2 ಕೆಜಿಯ 36 ಪ್ಯಾಕೆಟ್‌ ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಮಹಾರಾಷ್ಟ್ರಕ್ಕೆ ಮಾರಾಟಕ್ಕೆ ತೆಗೆದುಕೊಂಡು ಹೋಗಲಾ ಗುತ್ತಿತ್ತು ಎನ್ನಲಾಗಿದ್ದು, ಈ ಸಂಬಂಧ ಮಲ್ಲಿಕಾರ್ಜುನ ನಾಗಪ್ಪ ಸಗರ, ಸಿದ್ರಾಮಪ್ಪ ಬಸವಣ್ಣಪ್ಪ ಗುದಗೆ, ಛಾಯಾ ಬಾಳು ಭೋಸ್ಲೆ ಅವರನ್ನು ಬಂಧಿಸಲಾಗಿದೆ.

ವಿಯವಾಡಾದಿಂದ ಇವರಿಗೆ ಗಾಂಜಾ ಸರಬರಾಜು ಮಾಡಲಾಗಿತ್ತು. ಎಸ್‌ಐ ಗುರು ಪಾಟೀಲ ನೇತೃತ್ವದಲ್ಲಿ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ನಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್, ಡಿವೈಎಸ್ಪಿ ಸೋಮಲಿಂಗ ಕುಂಬಾರ ಮತ್ತು ಸಿಪಿಐ ಜೆ.ಎಸ್.ನ್ಯಾಮೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.