ADVERTISEMENT

ಬೀದರ್: ಆರ್‌ಎಫ್‌ಒ ಮನೆ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 16:08 IST
Last Updated 16 ಮಾರ್ಚ್ 2022, 16:08 IST
ಬೀದರ್ ನಗರದ ಆದರ್ಶ ಕಾಲೊನಿಯಲ್ಲಿರುವ ಯಾದಗಿರಿ ಆರ್‌ಎಫ್‌ಒ ರಮೇಶ ಪೀರಣ್ಣ ಕನಕಟ್ಟಿ ಅವರ ಮನೆ
ಬೀದರ್ ನಗರದ ಆದರ್ಶ ಕಾಲೊನಿಯಲ್ಲಿರುವ ಯಾದಗಿರಿ ಆರ್‌ಎಫ್‌ಒ ರಮೇಶ ಪೀರಣ್ಣ ಕನಕಟ್ಟಿ ಅವರ ಮನೆ   

ಬೀದರ್: ಯಾದಗಿರಿಯ ವಲಯ ಅರಣ್ಯಾಧಿಕಾರಿ ರಮೇಶ ಪೀರಣ್ಣ ಕನಕಟ್ಟಿ ಅವರ ಬೀದರ್‌ ಹಾಗೂ ಚಿಟಗುಪ್ಪ ತಾಲ್ಲೂಕಿನ ಉಡಬಾಳದ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಬೀದರ್ ನಗರದ ಆದರ್ಶ ಕಾಲೊನಿಯ ಭವ್ಯ ಮನೆ ಹಾಗೂ ಚಿಟಗುಪ್ಪ ತಾಲ್ಲೂಕಿನ ಉಡಬಾಳ ಗ್ರಾಮದಲ್ಲಿರುವ ಪೋಷಕರ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ಸಂದರ್ಭದಲ್ಲಿ ಚಿನ್ನಾಭರಣ, ಬೆಳ್ಳಿಯ ಆಭರಣ, ಬೆಳ್ಳಿಯ ಸಮೆ (ದೀಪ), ಆರತಿ, ಲೋಟ ಪತ್ತೆಯಾಗಿವೆ.

ಎಸಿಬಿ ಕಲಬುರಗಿ ಎಸ್‌ಪಿ ಅಮರನಾಥ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು ಎಸಿಬಿ ತಂಡ ಆಸ್ತಿ ವಿವರ ಲೆಕ್ಕ ಹಾಕುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.