ADVERTISEMENT

ಬೀದರ್‌ನ ಗುರುನಾನಕ್ ಆಸ್ಪತ್ರೆಗೆ ನಟ ಪ್ರಕಾಶ ರೈರಿಂದ ಆಂಬುಲೆನ್ಸ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 12:21 IST
Last Updated 25 ಮಾರ್ಚ್ 2023, 12:21 IST
ನಟ ಪ್ರಕಾಶ ರೈ ಅವರು ಬೀದರ್‌ನ ಗುರುನಾನಕ ಆಸ್ಪತ್ರೆಗೆ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದರು. ಸರ್ದಾರ್ ಪುನೀತ್‍ಸಿಂಗ್ ವಾಹನದ ಕೀ ಪಡೆದುಕೊಂಡರು
ನಟ ಪ್ರಕಾಶ ರೈ ಅವರು ಬೀದರ್‌ನ ಗುರುನಾನಕ ಆಸ್ಪತ್ರೆಗೆ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದರು. ಸರ್ದಾರ್ ಪುನೀತ್‍ಸಿಂಗ್ ವಾಹನದ ಕೀ ಪಡೆದುಕೊಂಡರು   

ಬೀದರ್: ಬಹುಭಾಷಾ ನಟ, ಪ್ರಕಾಶ ರೈ ನಗರದ ಗುರುನಾನಕ ಆಸ್ಪತ್ರೆಗೆ ಸುಸಜ್ಜಿತ ಆಂಬುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸರ್ದಾರ್ ಪುನೀತಸಿಂಗ್ ಈಚೆಗೆ ಆಂಬುಲೆನ್ಸ್ ಕೀ ಪಡೆದರು.

ಅತೀ ಕಡಿಮೆ ವೆಚ್ಚದಲ್ಲಿ, ಅತ್ಯುತ್ತಮ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಗುರುನಾನಕ್ ಆಸ್ಪತ್ರೆಗೆ ಈ ಕೊಡುಗೆ ನೀಡಲಾಗಿದೆ. ನಟ ಪ್ರಕಾಶ ರೈ ಅವರ ಕೊಡುಗೆ ಮಾದರಿಯಾಗಿದೆ. ಬಡವರ, ದುರ್ಬಲರ ಸೇವೆಗೆ ಇನ್ನಷ್ಟು ಶಕ್ತಿ ನೀಡಿದೆ ಎಂದು ಆಸ್ಪತ್ರೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಹೇಳಿದ್ದಾರೆ.

ಜನಪರ ಕಾಳಜಿಗೆ ನಟ ಪ್ರಕಾಶ ರೈ ಹೆಸರಾಗಿದ್ದಾರೆ. ಬಡವರಿಗೆ ನೆರವಾಗುವುದಕ್ಕಾಗಿ ಆಂಬುಲೆನ್ಸ್‌ ನೀಡಿದ್ದಾರೆ. ಅವರ ಕೊಡುಗೆ ಜನಸೇವೆಗೆ ನೆರವಾಗಲಿದೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.