ADVERTISEMENT

ಬಸವ ಕಲ್ಯಾಣ: ‘ಮೌನಿ ಬಾಬಾ’ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 2:47 IST
Last Updated 24 ಮಾರ್ಚ್ 2021, 2:47 IST
ಅಂಬ್ರೋಸ್ ಡಿ ಮೆಲ್ಲೋ
ಅಂಬ್ರೋಸ್ ಡಿ ಮೆಲ್ಲೋ   

ಬಸವಕಲ್ಯಾಣ: ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮೊದಲ ದಿನ ಮಂಗಳವಾರ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಬೆಂಗಳೂರಿನವರಾದ ಪರಿಸರವಾದಿ ಅಂಬ್ರೋಸ್ ಡಿ ಮೆಲ್ಲೋ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಭುವನೇಶ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು.

ಅಂಬ್ರೋಸ್ ಡಿ ಮೆಲ್ಲೋ ಅವರ ಬಳಿ ಅಲ್ಪ ಪ್ರಮಾಣದ ನಗದು ಬಿಟ್ಟರೆ ಬೇರೆ ಆಸ್ತಿ ಇಲ್ಲ. ಮೌನವ್ರತ ಪಾಲಿಸುತ್ತಿದ್ದು, ತಮ್ಮ ವಿಚಾರಗಳನ್ನು ಸ್ಲೇಟಿನಲ್ಲಿ ಬರೆದು ತಿಳಿಸುತ್ತಾರೆ. ಆದ್ದರಿಂದ ಇವರನ್ನು ‘ಮೌನಿ ಬಾಬಾ’ ಎಂದೇ ಗುರುತಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT