ADVERTISEMENT

ಬಸವಕಲ್ಯಾಣ: ವೇಗವಾಗಿ ಹೋಗುತಿದ್ದ ವಾಹನದ ಚಾಲಕನ ಪ್ರಶ್ನಿಸಿದಕ್ಕೆ ಕೊಲೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 10:43 IST
Last Updated 9 ಸೆಪ್ಟೆಂಬರ್ 2024, 10:43 IST
<div class="paragraphs"><p>ಶ್ರೀನಿವಾಸ ಬಿರಾದಾರ</p><p></p></div>

ಶ್ರೀನಿವಾಸ ಬಿರಾದಾರ

   

ಬಸವಕಲ್ಯಾಣ (ಬೀದರ್): ವೇಗವಾಗಿ‌ ಹೋಗುತಿದ್ದ ವಾಹನದ ಚಾಲಕನಿಗೆ ಪ್ರಶ್ನಿಸಿದಕ್ಕೆ ಯುವಕನಿಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಮೋರಖಂಡಿ ಗ್ರಾಮದಲ್ಲಿ ಭಾನುವಾರ ರಾತ್ರಿ‌ ನಡೆದಿದೆ.

ADVERTISEMENT

ಶ್ರೀನಿವಾಸ ಬಿರಾದಾರ (35) ಕೊಲೆಯಾದವರು. ಕೃಷಿಕರಾಗಿರುವ ಇವರು ಬಿಜೆಪಿ ಬೂತ್ ಘಟಕದ ಅಧ್ಯಕ್ಷ ಸಹ ಆಗಿದ್ದಾರೆ. ಗ್ರಾಮಕ್ಕೆ ಸಮೀಪದಲ್ಲಿ ರಸ್ತೆ ಸುಧಾರಣಾ ಕಾರ್ಯ ನಡೆಯುತ್ತಿದ್ದು ಅಲ್ಲಿಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಈ ರಸ್ತೆಯಿಂದ ವೇಗವಾಗಿ ಹೋಗುತ್ತಿತ್ತು ಎನ್ನಲಾಗಿದೆ. ಹೀಗಾಗಿ ರಸ್ತೆ‌ ಬದಿಯಲ್ಲಿ ನಿಂತಿದ್ದ ಶ್ರೀನಿವಾಸ ಅವರ ಮೈಮೇಲೆ ಕೆಸರು ಸಿಡಿದಿದೆ.

ಈ ಕಾರಣ ಕೋಪಗೊಂಡ ಶ್ರೀನಿವಾಸ ಚಾಲಕನಿಗೆ ಈ ಬಗ್ಗೆ ವಿಚಾರಿಸಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಟಿಪ್ಪರ್ ನಿಲ್ಲಿಸಿದ ಚಾಲಕ ಕೈಯಲ್ಲಿ ರಾಡ್ ಹಿಡಿದುಕೊಂಡು ಬಂದು ಇವರ ತಲೆಗೆ ಹೊಡೆದಿದ್ದಾನೆ. ಬಲವಾದ ಪೆಟ್ಟಾಗಿದ್ದರಿಂದ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ಊರಿನ ಯುವಕರು ಹಾಗೂ ಪೊಲೀಸರು ಟಿಪ್ಪರ್ ನ್ನು‌‌ ಬೆನ್ನಟ್ಟಿ ಚಾಲಕನನ್ನು ಹಿಡಿದಿದ್ದಾರೆ. ಶಿವರಾಜ ಬನಸೂಡೆ ಚಾಲಕ ಆಗಿದ್ದು ಇಂಡಿ ತಾಲ್ಲೂಕಿನವನಾಗಿದ್ದಾನೆ. ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.