ADVERTISEMENT

ಸಿಎಂಸಿ ಕಾಲೊನಿಯಲ್ಲಿ ಬಸವೇಶ್ವರ ಮೂರ್ತಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 13:19 IST
Last Updated 8 ಸೆಪ್ಟೆಂಬರ್ 2021, 13:19 IST
ಬೀದರ್‌ನ ಸಿಎಂಸಿ ಕಾಲೊನಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಬಸವೇಶ್ವರ ಮೂರ್ತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಪೂಜೆ ಸಲ್ಲಿಸಿದರು
ಬೀದರ್‌ನ ಸಿಎಂಸಿ ಕಾಲೊನಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಬಸವೇಶ್ವರ ಮೂರ್ತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಪೂಜೆ ಸಲ್ಲಿಸಿದರು   

ಬೀದರ್: ಬಸವೇಶ್ವರ ನೂತನ ಮೂರ್ತಿ ಸ್ಥಾಪನೆ ಕಾರ್ಯಕ್ರಮ ಇಲ್ಲಿಯ ಮೈಲೂರು ಹತ್ತಿರದ ಸಿಎಂಸಿ ಕಾಲೊನಿಯಲ್ಲಿ ನಡೆಯಿತು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಅವರು ಮೂರ್ತಿಗೆ ಪೂಜೆ ಸಲ್ಲಿಸಿದರು. ಶರಣ ಉದ್ಯಾನದ ಶೋಭಾ, ಅಣ್ಣೆಪ್ಪ ಬಿರಾದಾರ, ಶಂಕರೆಪ್ಪ ಯದಲಾಪುರೆ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಪ್ರಮುಖರಾದ ಅರ್ಜುನ ರಾಜೋಳೆ, ಶಂಕರರಾವ್ ಕಪಲಾಪೂರ, ಕಾಶೀನಾಥ ಮೂಲಗೆ, ಬಸವಣ್ಣಪ್ಪ ಬೆಳ್ಳೂರು, ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಧನರಾಜ ಪಾಟೀಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.