ADVERTISEMENT

ಸೇಂದಿ, ಸಾರಾಯಿ ವಶ:ಮೂವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 15:52 IST
Last Updated 3 ಏಪ್ರಿಲ್ 2020, 15:52 IST
ಅಬಕಾರಿ ಸಿಬ್ಬಂದಿ ಬೀದರ್‌ನ ವಡ್ಡರ ಕಾಲೊನಿಯಲ್ಲಿ ದಾಳಿ ನಡೆಸಿ ಪತ್ತೆ ಹಚ್ಚಿರುವ ಸೇಂದಿ ಹಾಗೂ ಕಳ್ಳಬಟ್ಟಿ ಸಾರಾಯಿ
ಅಬಕಾರಿ ಸಿಬ್ಬಂದಿ ಬೀದರ್‌ನ ವಡ್ಡರ ಕಾಲೊನಿಯಲ್ಲಿ ದಾಳಿ ನಡೆಸಿ ಪತ್ತೆ ಹಚ್ಚಿರುವ ಸೇಂದಿ ಹಾಗೂ ಕಳ್ಳಬಟ್ಟಿ ಸಾರಾಯಿ   

ಬೀದರ್: ನಗರದ ವಡ್ಡರ ಕಾಲೊನಿಯ ವಿವಿಧೆಡೆ ಅಬಕಾರಿ ಸಿಬ್ಬಂದಿ ಗುರುವಾರ ದಾಳಿ ನಡೆಸಿ ಅಕ್ರಮವಾಗಿ ತಯಾರಿಸಿ, ಮಾರಾಟ ಮಾಡಲು ಸಂಗ್ರಹಿಸಿಟ್ಟಿದ 240 ಲೀಟರ್ ಕಲಬೆರಕೆ ಸೇಂದಿ ಹಾಗೂ 8 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.

ದಾಳಿಯ ವೇಳೆ ಆರೋಪಿಗಳಾದ ಚಿನ್ನಯ್ಯ ತಿಮ್ಮಣ್ಣ, ಸುರೇಶ ಚಂದ್ರಪ್ಪ, ನಾಗರಾಜ ನಾಗಪ್ಪ ಎಂಬುವರು ಪರಾರಿಯಾಗಿದ್ದು, ಆರೋಪಿಗಳ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಅವರ ಪತ್ತೆಗೆ ಕ್ರಮವಹಿಸಲಾಗಿದೆ.

ಅಬಕಾರಿ ನಿರೀಕ್ಷಕ ಕೆ.ಎಸ್.ರಾಜಶೇಖರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ನಾನಾಗೌಡ ಕೇರೂರ, ದಯಾನಂದ, ದಿಲೀಪ್ ಠಾಕೂರ, ರಂಜೀತಾ, ಅಬಕಾರಿ ರಕ್ಷಕರಾದ ಶಿವಶಂಕರ, ಅನೀಲ, ರಾಜರೆಡ್ಡಿ, ಅಪ್ಪಾರೆಡ್ಡಿ, ರೋಹಿತ, ಹುಸೇನ್‌ಸಾಬ್, ವಾಹನ ಚಾಲಕರಾದ ವಿಷ್ಣುವರ್ಧನ, ಅತೀಕ್ ಮತ್ತು ರಾಹುಲ್ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.