ಸತತ ಮಳೆಗೆ ನೆನೆದು ಬೀದರ್ನ ಬಹಮನಿ ಕೋಟೆಯ ಗೋಡೆ ಬುಧವಾರ ಕುಸಿದು ಬಿದ್ದಿದ್ದು, ಅದರ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ
ಬೀದರ್: ಸತತ ಮಳೆಗೆ ನಗರದ ಬಹಮನಿ ಕೋಟೆ ಗೋಡೆ ಕುಸಿದಿದೆ. ಎಂದು ಎಎಸ್ಐ ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ 28ರಂದು ಭಾಗಶಃ ಬಿದ್ದಿತ್ತು.
ಮಹಾರಾಷ್ಟ್ರ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ನದಿಗೆ ಹರಿಸುತ್ತಿದ್ದು, ಮಾಂಜ್ರಾ ನದಿಯಲ್ಲಿ ಪ್ರವಾಹ ಬಂದಿದೆ. ಕಮಲನಗರ ತಾಲ್ಲೂಕಿನ ಖೇಡ್–ಸಂಗಮ, ಸಂಗಮ–ಠಾಣಾಕುಶನೂರ ಸೇತುವೆ ಜಲಾವೃತವಾಗಿದೆ.
ಕಲಬುರಗಿ ವರದಿ: ‘ಅಫಜಲಪುರ ತಾಲ್ಲೂಕಿನ ಸೊನ್ನ ಬಳಿ ಭೀಮಾ ನದಿಗೆ ನಿರ್ಮಿಸಿರುವ ಬ್ಯಾರೇಜ್ನಲ್ಲಿ ಬುಧವಾರ ಸಂಜೆ 2.80 ಲಕ್ಷ ಕ್ಯೂಸೆಕ್ ಒಳಹರಿವು ಹಾಗೂ ಅಷ್ಟೇ ಪ್ರಮಾಣದ ಹೊರ ಹರಿವು ದಾಖಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.