ADVERTISEMENT

ಕಮಲನಗರ: ಅಪಘಾತ; ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:18 IST
Last Updated 10 ಸೆಪ್ಟೆಂಬರ್ 2021, 5:18 IST
ಪ್ರಕಾಶ ಪಂಡರಿ ಬಿರಾದಾರ
ಪ್ರಕಾಶ ಪಂಡರಿ ಬಿರಾದಾರ   

ಕಮಲನಗರ: ತಾಲ್ಲೂಕಿನ ಮುರ್ಕಿ ಮತ್ತು ಹಕ್ಯಾಳ ಗ್ರಾಮದ ಮಧ್ಯೆ ಗುರುವಾರ ಬೈಕ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಶಿವಪುರ ಗ್ರಾಮದ ಪ್ರಕಾಶ ಪಂಡರಿ ಬಿರಾದಾರ(34) ಮೃತರು. ಮೃತನು ಶಿವಪುರದಿಂದ ಬೈಕ್ ಮೇಲೆ ರಂಡ್ಯಾಳ ಗ್ರಾಮಕ್ಕೆ ತೆರಳುತ್ತಿದ್ದರು. ಎದುರಿನಿಂದ ಇನ್ನೊಂದು ಬೈಕ್ ಮೇಲೆ ಇಬ್ಬರೂ ಬರುತ್ತಿರುವಾಗ ಮುಖಾಮುಖಿ ಡಿಕ್ಕಿಯಾಗಿದೆ.

ಗಂಭೀರ ಗಾಯಕೊಂಡ ಗಾಯಾಳುಗಳನ್ನು ತಕ್ಷಣವೇ ಕಮಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಗಂಭೀರವಾಗಿ ಗಾಯಗೊಂಡ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಉದಗೀರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಘಟನೆ ಕುರಿತು ಕಿಶೋರ ವಿಠ್ಠಲರಾವ ಬಿರಾದಾರ ನೀಡಿದ ದೂರಿನ ಮೇರೆಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಮಲನಗರ ಕ್ರೈಮ್ ಪಿಎಸ್‍ಐ ಬಸವರಾಜ ಪಾಟೀಲ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.