ಹುಮನಾಬಾದ್: ‘ದೇಶದ ಅಭಿವೃ ದ್ಧಿಯಲ್ಲಿ ಬಿಜೆಪಿ ಸರ್ಕಾರದ ಕೊಡುಗೆ ಅಪಾರ’ ಎಂದು ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಮಾರ ಚಿಂಚೋಳಿ ಗ್ರಾಮದಲ್ಲಿ ಬಿಜೆಪಿ ಮಂಡಲ ವತಿಯಿಂದ ನಡೆದ ವಿಜಯ ಸಂಕಲ್ಪ ಅಭಿಯಾನದಲ್ಲಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳ ಕುರಿತು ಜನರಿಗೆ ಇನ್ನಷ್ಟು ಮಾಹಿತಿ ನೀಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.
ಬಿಎಸ್ಎಸ್ಕೆ ಅಧ್ಯಕ್ಷ ಸುಭಾಷ ಕಲ್ಲೂರ, ಬಸವರಾಜ ಆರ್ಯ, ಒ.ಬಿ.ಸಿ ಮೋರ್ಚಾ ಅಧ್ಯಕ್ಷ ಜ್ಞಾನದೇವ ನಿರಗುಡೆ, ಮಲ್ಲಿಕಾರ್ಜುನ ಕುಂಬಾರ, ಅನೀಲ ಪಸರ್ಗಿ, ಶಿವರಾಜ ಧೂಮ್ಮನಸೂರೆ, ದೀಲಿಪಕುಮಾರ್ ಸಾಟೆ, ಬಲಭೀಮ ಚಂದನಹಳ್ಳಿ, ವಿನಾಯಕ ಮಂಕೋಜಿ, ನಾಗಭೂಷಣ ಸಂಗಮ್, ಸಂತೋಷ, ಗಿರೀಶ ತುಂಬಾ, ಶ್ರೀನಾಥ ದೇವಣಿ, ಸುನೀಲ ಪತ್ರಿ, ನಾಗಯ್ಯ ಸ್ವಾಮಿ, ಲೋಕೇಶ ಸ್ವಾಮಿ, ನಾಗಶೆಟ್ಟಿ ಹಾಗೂ ಭೀಮರಾವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.