ADVERTISEMENT

ಔರಾದ್ ಮೀಸಲು‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರಭು ಚವಾಣ್ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 10:26 IST
Last Updated 17 ಏಪ್ರಿಲ್ 2023, 10:26 IST
ನಾಮಪತ್ರ ಸಲ್ಲಿಸಿ ರೋಡ್‌ ಶೋ ನಡೆಸಿದ ಪ್ರಭು ಚವ್ಹಾಣ್‌
ನಾಮಪತ್ರ ಸಲ್ಲಿಸಿ ರೋಡ್‌ ಶೋ ನಡೆಸಿದ ಪ್ರಭು ಚವ್ಹಾಣ್‌   

ಔರಾದ್ : ಔರಾದ್ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರಭು‌ ಚವಾಣ್ ಸೋಮವಾರ ತಮ್ಮ ಅಪಾರ ಬೆಂಬಲಿಗರು ಕಾರ್ಯಕರ್ತರೊಂದಿಗೆ ಮೆರವಣಿಗೆ‌ ಮೂಲಕ‌ ಬಂದು‌ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ತಮ್ಮ ಕುಟುಂಬದವರ ಜತೆ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಕನ್ನಡಾಂಬೆ ವೃತ್ತದಿಂದ ಬಸವೇಶ್ವರ ವೃತ್ತ, ಸರ್ಕಾರಿ ಅಸ್ಪತ್ರೆ, ಜಿಲ್ಲಾ ನ್ಯಾಯಾಲಯ ಮೂಲಕ ಪ್ರವಾಸಿ ಮಂದಿರದವರೆಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ರೋಡ್‌ ಶೋ‌ ನಡೆಸಿದರು.

ಬಿಜಿಪಿ ಮುಖಂಡ ಅಮರನಾಥ ಪಾಟೀಲ, ಶಿವರಾಜ ಗಂದಗೆ, ವಸಂತ ವಕೀಲ್, ವೀರಣ್ಣ ಕಾರಬಾರಿ, ರಾಮಶೆಟ್ಟಿ‌ ಪನ್ನಾಳೆ, ವೈಜಿನಾಥ ಬುಟ್ಟೆ, ಸುರೇಶ ಭೋಸ್ಲೆ, ಶರಣಪ್ಪ‌ ಪಂಚಾಕ್ಷರಿ, ರಾಮ ನರೋಟೆ, ಧೋಂಡಿಬಾ ನರೋಟೆ ರೋಡ್‌ ಶೋನಲ್ಲಿ‌ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.