ADVERTISEMENT

ಬೀದರ್‌ | ಮಾರಾಮಾರಿ: 19 ವಿದ್ಯಾರ್ಥಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 4:19 IST
Last Updated 9 ಜೂನ್ 2024, 4:19 IST
   

ಬೀದರ್‌: ನಗರದ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ಜೈಶ್ರೀರಾಮ್‌’ ಹಾಡಿನ ವಿಚಾರಕ್ಕೆ ಈಚೆಗೆ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ 19 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಗೊಳಿಸಲಾಗಿದೆ.

‘ಮಾರಾಮಾರಿಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯು ಐವರು ಉಪನ್ಯಾಸಕರ ವಿಚಾರಣಾ ಸಮಿತಿ ರಚಿಸಿದೆ.  ಕಾಲೇಜಿನ ಆಂತರಿಕ ವಿಚಾರಣೆ ಸಮಿತಿಯ ವರದಿಯು ಪೊಲೀಸ್‌ ಸಿಬ್ಬಂದಿಗೆ ಮುಂದಿನ ವಿಚಾರಣೆಗೆ ಸಹಾಯವಾಗಲಿದೆ’ ಎಂದು ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT