ಬೀದರ್: ನಗರದ ಮೈಲೂರಿನ ಸಿಎಂಸಿ ಕಾಲೊನಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿಯ ವತಿಯಿಂದ ಬುದ್ಧ ಪೂರ್ಣಮೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ,
ಬೆಲ್ದಾಳ ಸಿದ್ಧರಾಮ ಶರಣರು ಗೌತಮ ಬುದ್ಧರ ತತ್ವಗಳ ಕುರಿತು ಮಾತನಾಡಿದರು.
ಗಾಂಧಿಗಂಜ್ ಸಿಪಿಐ ಜಿ.ಎಸ್. ಬಿರಾದಾರ, ಸಮಿತಿಯ ಲಕ್ಷ್ಮಣರಾವ್ ಮಿಠಾರೆ, ಶಿವಕುಮಾರ ಭಾವಿಕಟ್ಟಿ, ಕಾಶೀನಾಥ ಭಾಸನ್, ಸುಧಾಕರ್, ಶಂಕರರಾವ್ ಕರಕನಳ್ಳಿ, ಸೂರ್ಯಕಾಂತ ಪ್ಯಾರೆ, ಕಮಲಾಕರ್ ಭಾವಿದೊಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ವಿಠ್ಠಲರಾವ್ ಮನ್ನಾಎಖೆಳ್ಳಿಕರ್ ಅಧ್ಯಕ್ಷತೆ ವಹಿಸಿದ್ದರು. ಸುಬಣ್ಣ ಕರಕನಳ್ಳಿ ನಿರೂಪಿಸಿದರು. ಪ್ರಕಾಶ ಜನವಾಡಕರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.