ADVERTISEMENT

49 ಅಭ್ಯರ್ಥಿಗಳು ಶಿಶಿಕ್ಷು ತರಬೇತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 13:53 IST
Last Updated 9 ಜುಲೈ 2021, 13:53 IST
ಬೆಂಗಳೂರಿನ ಬಿ.ಇ.ಎಲ್. ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಆಯ್ಕೆಯಾದ ಐಟಿಐ ಅಭ್ಯರ್ಥಿಗಳಿಗೆ ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ ನೇಮಕಾತಿ ಪತ್ರ ನೀಡಿದರು
ಬೆಂಗಳೂರಿನ ಬಿ.ಇ.ಎಲ್. ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಆಯ್ಕೆಯಾದ ಐಟಿಐ ಅಭ್ಯರ್ಥಿಗಳಿಗೆ ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ ನೇಮಕಾತಿ ಪತ್ರ ನೀಡಿದರು   

ಬೀದರ್: ಸಿ.ಬಿ.ಟಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಜಿಲ್ಲೆಯ ವಿವಿಧ ಐಟಿಐಗಳ 49 ಅಭ್ಯರ್ಥಿಗಳು ಬೆಂಗಳೂರಿನ ಬಿ.ಇ.ಎಲ್ ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಆಯ್ಕೆಯಾಗಿದ್ದಾರೆ.

ಕೋವಿಡ್ ಕಾರಣ ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಆಯೋಜಿಸಿದ್ದ ಆನ್‍ಲೈನ್ ಸಂದರ್ಶನದಲ್ಲಿ ಕಾರ್ಖಾನೆ ಪ್ರತಿನಿಧಿಗಳು, ಔರಾದ್ ಐಟಿಐನ 7, ಬೀದರ್ ಐಟಿಐನ 26, ಬಸವೇಶ್ವರ ಅಂಗವಿಕಲರ ಐಟಿಐನ 15 ಹಾಗೂ ಕರ್ನಾಟಕ ಐಟಿಐನ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡರು.

ಆಯ್ಕೆಯಾದವರಿಗೆ ಮಾಸಿಕ ₹ 9,550 ವಿದ್ಯಾರ್ಥಿ ವೇತನ ಸಿಗಲಿದೆ. ಜುಲೈ 19ಕ್ಕೆ ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಹಾಜರಾಗಬೇಕಾಗಲಿದೆ ಎಂದು ಬಿ.ಇ.ಎಲ್ ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ನಂಜುಂಡಸ್ವಾಮಿ ತಿಳಿಸಿದರು.

ADVERTISEMENT

ಶಿವಶಂಕರ ಟೋಕರೆ ಅವರು ಕ್ಯಾಂಪಸ್ ಸಂದರ್ಶನ ಆಯೋಜಿಸಿ ಐಟಿಐ ಅಭ್ಯರ್ಥಿಗಳಿಗೆ ನೆರವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ, ಪ್ರಾಚಾರ್ಯ ಶಿವಕುಮಾರ ಪಾಟೀಲ, ಸಂಜೀವರೆಡ್ಡಿ, ತುಕಾರಾಮ ನಿರ್ಣಾಕರ, ಬಸವರಾಜ ಡಿಗ್ಗೆ ಇದ್ದರು.

ಯುಸೂಫ್‍ಮಿಯ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ರಾಘವೇಂದ್ರ ಮುತ್ತಂಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.