ADVERTISEMENT

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಶಿವರಾಚಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 12:59 IST
Last Updated 25 ಡಿಸೆಂಬರ್ 2019, 12:59 IST
ಹುಮನಾಬಾದ್‍ನ ಕ್ಷೇತ್ರ ಸಂಪನ್ಮೂಲ ಕಚೇರಿಯಲ್ಲಿ ಸೋಮವಾರ ನಡೆದ ಇನ್‌ಸ್ಪೈಯರ್ಡ್ ಕಾರ್ಯಾಗಾರದಲ್ಲಿ ಶ್ರೀವೀರಭದ್ರೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿ ಸುಮೀತ ಹೊಸಮನಿ ಅವರ ಸಿದ್ದ ಪಡಿಸಿಕೊಂಡು ಬಂದ ಯೋಜನೆಗಳನ್ನು ಅಧಿಕಾರಿಗಳು ವಿಕ್ಷೀಸಿದರು
ಹುಮನಾಬಾದ್‍ನ ಕ್ಷೇತ್ರ ಸಂಪನ್ಮೂಲ ಕಚೇರಿಯಲ್ಲಿ ಸೋಮವಾರ ನಡೆದ ಇನ್‌ಸ್ಪೈಯರ್ಡ್ ಕಾರ್ಯಾಗಾರದಲ್ಲಿ ಶ್ರೀವೀರಭದ್ರೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿ ಸುಮೀತ ಹೊಸಮನಿ ಅವರ ಸಿದ್ದ ಪಡಿಸಿಕೊಂಡು ಬಂದ ಯೋಜನೆಗಳನ್ನು ಅಧಿಕಾರಿಗಳು ವಿಕ್ಷೀಸಿದರು   

ಹುಮನಾಬಾದ್: ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಹೇಳಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕಚೇರಿ ಸಭಾಂಗಣದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಸೋಮವಾರ ನಡೆದ 2019-20ನೇ ಸಾಲಿನ ಇನ್‌ಸಪೈಯರ್ಡ್ ಅವಾರ್ಡ್ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಶಿಕ್ಷಕರು ಶಾಲಾ ಹಂತದಿಂದ ಮಕ್ಕಳಿಗೆ ಪಠ್ಯದ ಜತೆಗೆ ವೈಜ್ಞಾನಿಕ ದ್ಯಷ್ಠಿಕೋನ ಮೂಡಿಸುವುದರಿಂದ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.

ADVERTISEMENT

ಶಿಕ್ಷಕ, ಶಿಕ್ಷಕಿಯರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕಲೆ, ಸಾಹಿತ್ಯ, ಸಂಸ್ಕ್ರತಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಡಯಟ್ ಕಾಲೇಜಿನ ಪ್ರಾಚಾರ್ಯ ಶಶಿಕಾಂತ ವರ್ತುಳೆ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವಕುಮಾರ ಪಾರಶೆಟ್ಟಿ, ಉಪನ್ಯಾಸಕ ದೇವೆಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಸಂಪನ್ಮೂಲ ಅಧಿಕಾರಿ ಮಾರುತಿ ಸಾಗರ್, ರಾಜ್ಯ ಸಂಪನ್ಮೂಲ ವ್ಯಕ್ತಿ, ಖಲೀಲ್ ಅಹಮ್ಮದ್ ಬಿಆರ್‌ಪಿ ಶ್ರೀಮಂತ ಧನಶ್ರೀ, ಸಚಿನ ಇದ್ದರು. ಸಿಆರ್‌ಪಿ ಪ್ರಕಾಶ ಬಂಬೂಳಗಿ ನಿರೂಪಿಸಿದರು. ಮಲ್ಲಪ್ಪ ಜಿಗಜಿಣಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.