ADVERTISEMENT

ಬೀದರ್: ನೆಹರು ಯುವ ಕೇಂದ್ರದಿಂದ ಸ್ವಚ್ಛತಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 8:17 IST
Last Updated 10 ಅಕ್ಟೋಬರ್ 2021, 8:17 IST
ಬೀದರ್‌ನ ಮೇಗೂರ ಕಣ್ಣಿನ ಆಸ್ಪತ್ರೆಯ ಬಳಿ ವಾರ್ತಾ ಇಲಾಖೆಯ ಸಿಬ್ಬಂದಿ ಕಸ ಗುಡಿಸಿದರು
ಬೀದರ್‌ನ ಮೇಗೂರ ಕಣ್ಣಿನ ಆಸ್ಪತ್ರೆಯ ಬಳಿ ವಾರ್ತಾ ಇಲಾಖೆಯ ಸಿಬ್ಬಂದಿ ಕಸ ಗುಡಿಸಿದರು   

ಬೀದರ್: ನೆಹರು ಯುವ ಕೇಂದ್ರದ ವತಿಯಿಂದ ನಗರದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಉದಗಿರ ರಸ್ತೆಯಲ್ಲಿರುವ ಅಕ್ಕ ಮಹಾದೇವಿ ಮಹಿಳಾ ಕಾಲೇಜಿನ ಆವರಣದಿಂದ ಸ್ವಚ್ಛತಾ ಕಾರ್ಯ ಆರಂಭಿಸಿದ ಸ್ವಯಂ ಸೇವಕರು ಮೇಗೂರ ಕಣ್ಣಿನ ಆಸ್ಪತ್ರೆ, ಸಾಯಿಬಾಬಾ ಮಂದಿರ ಹಾಗೂ ಜೆಸ್ಕಾಂ ಕಚೇರಿ ಬಳಿ ಕಸ ಗುಡಿಸಿ ಸ್ವಚ್ಛಗೊಳಿಸಿದರು.

ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ಮಯೂರ ಗೋರ್ಮೆ, ವಾರ್ತಾ ಇಲಾಖೆಯ ಅಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಿಬ್ಬಂದಿ ಬಿಂದು, ನಾಗಶೆಟ್ಟಿ, ಗೀತಾ, ತನ್ವೀರ್, ವಿಜಯಲಕ್ಷ್ಮಿ, ನೆಹರು ಯುವ ಕೇಂದ್ರ ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.