ADVERTISEMENT

ಶೋಷಣೆಗೆ ಮುಕ್ತಿ ನೀಡಿದ ಸಹಕಾರ ಆಂದೋಲನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 14:15 IST
Last Updated 5 ಅಕ್ಟೋಬರ್ 2021, 14:15 IST
ಬೀದರ್‌ ಪ್ರತಾಪನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ಕಡೂರು ತಾಲ್ಲೂಕು ಸಹಕಾರ ಸಂಘಗಳ ಅಧ್ಯಕ್ಷರ ತರಬೇತಿ ಕಾರ್ಯಕ್ರವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್. ಪಾಟೀಲ ಗಾದಗಿ ಉದ್ಘಾಟಿಸಿದರು. ಸುಬ್ರಹ್ಮಣ್ಯ ಪ್ರಭು, ಮಂಜುನಾಥ, ಚನ್ನಬಸಯ್ಯ ಸ್ವಾಮಿ, ಚನ್ನಮಲ್ಲಿಕಾರ್ಜುನ, ವಿಠ್ಠಲರೆಡ್ಡಿ ಯಡಮಲ್ಲೆ, ಎಸ್.ಜಿ. ಪಾಟೀಲ ಇದ್ದರು
ಬೀದರ್‌ ಪ್ರತಾಪನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ಕಡೂರು ತಾಲ್ಲೂಕು ಸಹಕಾರ ಸಂಘಗಳ ಅಧ್ಯಕ್ಷರ ತರಬೇತಿ ಕಾರ್ಯಕ್ರವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್. ಪಾಟೀಲ ಗಾದಗಿ ಉದ್ಘಾಟಿಸಿದರು. ಸುಬ್ರಹ್ಮಣ್ಯ ಪ್ರಭು, ಮಂಜುನಾಥ, ಚನ್ನಬಸಯ್ಯ ಸ್ವಾಮಿ, ಚನ್ನಮಲ್ಲಿಕಾರ್ಜುನ, ವಿಠ್ಠಲರೆಡ್ಡಿ ಯಡಮಲ್ಲೆ, ಎಸ್.ಜಿ. ಪಾಟೀಲ ಇದ್ದರು   

ಬೀದರ್: ಸಹಕಾರ ಆಂದೋಲನವು ರೈತರನ್ನು ದೊಡ್ಡ ದೊಡ್ಡ ಭೂಮಾಲೀಕರ ಶೋಷಣೆಯಿಂದ ಮುಕ್ತಗೊಳಿಸಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್. ಪಾಟೀಲ ಗಾದಗಿ ಹೇಳಿದರು.

ನಗರದ ಪ್ರತಾಪನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ನಬಾರ್ಡ್ ಪ್ರಾಯೋಜಿತ್ವದಲ್ಲಿ ಆಯೋಜಿಸಿರುವ ಕಡೂರು ತಾಲ್ಲೂಕು ಸಹಕಾರ ಸಂಘಗಳ ಅಧ್ಯಕ್ಷರ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳು ರೈತರಿಗೆ ಅವಶ್ಯಕ ಬಂಡವಾಳವನ್ನು ಸುಲಭವಾಗಿ ಒದಗಿಸುತ್ತಿವೆ. ಕೃಷಿ ಕ್ಷೇತ್ರವನ್ನು ಸ್ವಾವಲಂಬಿಯಾಗಿಸುವಲ್ಲಿ ಸಫಲವಾಗಿವೆ ಎಂದು ತಿಳಿಸಿದರು.

ADVERTISEMENT

ಡಿಸಿಸಿ ಬ್ಯಾಂಕ್ ಪ್ರಯತ್ನದಿಂದಾಗಿ ಸಾಲ ಮನ್ನಾ ಯೋಜನೆಯಡಿ ಬೀದರ್ ಜಿಲ್ಲೆಯ 1.65 ಲಕ್ಷ ಸದಸ್ಯ ರೈತರ ರೂ. 527 ಕೋಟಿ ಸಾಲ ಮನ್ನಾ ಆಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಮಾತನಾಡಿ, ಸಹಕಾರ ಸಂಘಗಳು ಸಾಲದ ವ್ಯವಹಾರದ ಜತೆಗೆ ಮಾರಾಟ ಪ್ರಕ್ರಿಯೆಗಳನ್ನೂ ನಡೆಸುತ್ತಿವೆ. ನಾಫೆಡ್ ನೆರವಿನಿಂದ ಸಕ್ಕರೆ, ಚಹಾಪುಡಿ, ಎಣ್ಣೆ, ಸಾಬೂನು ತರಿಸಿಕೊಂಡು ಸಂಘಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಡೂರು ತಾಲ್ಲೂಕಿನ ಗಿರಿಯಾಪುರ ಸಹಕಾರ ಸಂಘದ ಅಧ್ಯಕ್ಷ ಚನ್ನಮಲ್ಲಿಕಾರ್ಜುನ, ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ, ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಮಾತನಾಡಿದರು.

ಎಸ್.ಜಿ. ಪಾಟೀಲ, ಮಂಜುನಾಥ, ದಿವ್ಯ ಮತ್ತು ಮೇಘನಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.